ಮಾಣಿಕ್ಯರಾಜ್ ಪಡಿವಾಳ್

Update: 2020-06-05 11:45 GMT

ಉಪ್ಪಿನಂಗಡಿ: ಕಾಂಗ್ರೆಸ್ ಮುಖಂಡ, ಬಜತ್ತೂರು ಗ್ರಾಮದ ವಳಾಲು ಬಾರಿಕೆ ನಿವಾಸಿ ಮಾಣಿಕ್ಯರಾಜ್ ಪಡಿವಾಳ್ (68) ಹೃದಯಾಘಾತದಿಂದ ಜೂ.4ರಂದು ಸ್ವಗೃಹದಲ್ಲಿ ನಿಧನರಾದರು.

ದ.ಕ. ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾಗಿದ್ದ ಮಾಣಿಕ್ಯರಾಜ್ ಪಡಿವಾಳರು, ಪುತ್ತೂರು ಕೋಟಿ- ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಸದಸ್ಯರಾಗಿದ್ದು, ಎಪಿಎಂಸಿಯ ಮಾಜಿ ನಿರ್ದೇಶಕ, ಬಜತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾಗಿ ಸೇರಿದಂತೆ ಶೈಕ್ಷಣಿಕ- ಧಾರ್ಮಿಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ