ಕಾರುಗಳ ನಡುವೆ ಅಪಘಾತ: ಓರ್ವ ಮೃತ್ಯು
Update: 2020-07-15 12:28 GMT
ಬೆಂಗಳೂರು, ಜು.15: ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಓರ್ವ ಮೃತಪಟ್ಟಿರುವ ಘಟನೆ ಇಲ್ಲಿನ ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೆಂಕಟಾಲ ಕೆರೆ ಸಮೀಪದ ನಿವಾಸಿ ಕಾರ್ತಿಕ್ ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
ಯಲಹಂಕದ ಮಾವಳ್ಳಿಪುರ ಕ್ರಾಸ್ನ ಬಳಿ ಕಾರ್ತಿಕ್ ಸ್ನೇಹಿತರೊಬ್ಬರನ್ನು ತನ್ನ ಕಾರಿನಲ್ಲಿ ಬಿಟ್ಟು ವಾಪಸ್ ಬರುವಾಗ ಈ ಅವಘಡ ಸಂಭವಿಸಿದೆ. ಸದ್ಯ ಮಂಗಳವಾರ ರಾತ್ರಿಯಿಂದಲೇ ರಸ್ತೆ ಸಂಪುರ್ಣವಾಗಿ ಬಂದ್ ಆಗಿತ್ತು. ಈ ವೇಳೆ ವೇಗದಲ್ಲಿ ಕಾರು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಈ ಸಂಬಂಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.