ಮದುವೆ ಆಗುವುದಾಗಿ ನಂಬಿಸಿ ವಂಚನೆ ಆರೋಪ: ಯುವಕನ ವಿರುದ್ಧ ದೂರು
Update: 2020-07-17 11:21 GMT
ಬೆಂಗಳೂರು, ಜು.17: ಮದುವೆ ಆಗುವುದಾಗಿ ನಂಬಿಸಿ ಯುವಕನೋರ್ವ ವಂಚಿಸಿದ್ದಾನೆ ಎಂದು ಆರೋಪಿ ಮಹಿಳೆಯೊಬ್ಬರು ಇಲ್ಲಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಾರುತಿ ನಗರದ ನಿವಾಸಿ ಸಂತ್ರಸ್ತೆ ಚಲನಚಿತ್ರ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, 2018ರಲ್ಲಿ ಫೇಸ್ಬುಕ್ನಲ್ಲಿ ವಿಜಯಪ್ರಸಾದ್ ಎಂಬವರ ಪರಿಚಯ ಮಾಡಿಕೊಂಡಿದ್ದರು. ಇದಾದ ಬಳಿಕ ಆತ ವಿವಾಹವಾಗುವುದಾಗಿ ನಂಬಿಸಿ 1ಲಕ್ಷ ರೂ. ಪಡೆದಿದ್ದು, ತದನಂತರ ನಾಪತ್ತೆಯಾಗಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದು, ಇದನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.