ವಿಮಾನ ದುರಂತ: ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ ಕೋವಿಡ್ ಟೆಸ್ಟ್: ಶೈಲಜಾ

Update: 2020-08-08 07:58 GMT

ತಿರುವನಂತಪುರ, ಆ.8: ಮುನ್ನಚ್ಚರಿಕಾ ಕ್ರಮದ ಭಾಗವಾಗಿ ಕೋಝಿಕ್ಕೋಡ್ ಏರ್‌ಪೋರ್ಟ್ ನಲ್ಲಿ ವಿಮಾನ ದುರಂತದ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದವರಿಗೆ ಕೇರಳ ಸರಕಾರ ಕೋವಿಡ್-19 ಪರೀಕ್ಷೆ ನಡೆಸಲಿದೆ. ಅವರೆಲ್ಲರೂ ಸ್ವಯಂ ಕ್ವಾರಂಟೈನ್‌ಗೆ ಒಳಗಾಗಬೇಕು ಎಂದು ಆರೋಗ್ಯ ಸಚಿವೆ ಕೆಕೆ ಶೈಲಜಾ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದರೆಲ್ಲರೂ ಈ ಕುರಿತು ಆರೋಗ್ಯ ಇಲಾಖೆಗೆ ಮಾಹಿತಿ ನೀಡಲೇಬೇಕು ಅಥವಾ ಟೋಲ್ ಫ್ರೀ ನಂಬರ್‌ಗಳಾದ 1056,04712552056 ಅಥವಾ ಕಂಟ್ರೋಲ್ ರೂಮ್‌ಗಳಾದ 0483 2733251,2733252, 2733253,04952376063,2371471,2373901ಕ್ಕೆ ಸಂಪರ್ಕಿಸಬೇಕು. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾದವರ ಪಟ್ಟಿಯನ್ನು ಆರೋಗ್ಯ ಇಲಾಖೆ ಸಿದ್ಧಪಡಿಸಲಿದೆ ಎಂದು ಶೈಲಜಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News