ಗಲಭೆ ಪೂರ್ವನಿರ್ಧರಿತವೇ ಎನ್ನುವುದನ್ನು ತನಿಖೆ ನಡೆಸಿದ ಬಳಿಕ ಹೇಳುತ್ತೇವೆ: ಕಮಿಷನರ್ ಕಮಲ್ ಪಂತ್

Update: 2020-08-11 19:59 GMT

ಬೆಂಗಳೂರು: ಕಾವಲ್ ಭೈರಸಂದ್ರ ಗಲಭೆ ಪ್ರಕರಣದಲ್ಲಿ ಪೊಲೀಸ್ ವೈಫಲ್ಯವಾಗಿಲ್ಲ. ಗಲಭೆ ಒಮ್ಮೆಲೇ ಶುರುವಾಯಿತು. ಕಲ್ಲುತೂರಾಟ ನಡೆಯಿತು ಎಂದು ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆ.

ಕೆಲವು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ. ಇದು ಪೂರ್ವನಿರ್ಧರಿತವೇ ಎನ್ನುವುದನ್ನು ತನಿಖೆ ನಡೆಸಿದ ಬಳಿಕ ಹೇಳುತ್ತೇವೆ. ಬಾಣಸವಾಡಿ, ಡಿಜೆ ಹಳ್ಲಿ, ಕೆಜೆ ಹಳ್ಳಿಯಲ್ಲಿ ಕರ್ಫ್ಯೂ ಹಾಕಲಾಗಿದೆ. ಸದ್ಯ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News