ಪೆಟ್ರೋಲ್ ತುಂಬಿಸಿ ಹಣ ನೀಡದೆ ಪರಾರಿಯಾದ ಕಾರು ಚಾಲಕ: ದೂರು

Update: 2020-08-20 12:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.20: ಐಷಾರಾಮಿ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬ ಪೆಟ್ರೋಲ್ ತುಂಬಿಸಿಕೊಂಡು ಹಣ ನೀಡದೆ, ಪರಾರಿಯಾದ ಘಟನೆ ಮಾರತ್‍ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳಗ್ಗಿನ ಜಾವ 2:45ರ ಸುಮಾರಿಗೆ, ಇನ್ನೂ ನೋಂದಣಿಯಾಗದ ಕಾರ್ ನಲ್ಲಿ ಎನ್.ಎನ್ ಪೆಟ್ರೋಲ್ ಬಂಕಿಗೆ ಬಂದಿದ್ದ ಚಾಲಕ, 4 ಸಾವಿರ ರೂ. ಪೆಟ್ರೋಲ್ ತುಂಬಿಸಿಕೊಂಡು, ಸಿಬ್ಬಂದಿ ಪೆಟ್ರೋಲ್ ಹಾಕಿ ಮುಗಿಸಿದ ಕೂಡಲೇ ಹಣ ನೀಡದೆ ವೇಗವಾಗಿ ಕಾರು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಕಾರು ಚಾಲಕ ಪರಾರಿಯಾದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಪೆಟ್ರೊಲ್ ಬಂಕ್ ಮಾಲಕ ಕಿರಣ್ ನಾಗರಾಜ್ ಮಾರತ್ತಹಳ್ಳಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News