ಇತಿಹಾಸವೇ ನ್ಯಾಯಾಲಯಗಳ ಕುರಿತು ತೀರ್ಪು ನೀಡುತ್ತದೆ: ಪ್ರಶಾಂತ್ ಭೂಷಣ್ ಪ್ರಕರಣದ ಬಗ್ಗೆ ಕಪಿಲ್ ಸಿಬಲ್

Update: 2020-08-22 11:59 GMT

ಹೊಸದಿಲ್ಲಿ: “ನ್ಯಾಯಾಂಗ ನಿಂದನೆ ಕುರಿತು ಇರುವ ಅಧಿಕಾರವನ್ನು ದೊಡ್ಡ ಸುತ್ತಿಗೆಯಂತೆ ಬಳಸಲಾಗುತ್ತಿದೆ” ಎಂದು ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ.

ವಕೀಲ ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಿಬಲ್ ಮೇಲಿನ ಮಾತುಗಳನ್ನಾಡಿದ್ದಾರೆ.

“ನ್ಯಾಯಾಂಗ ನಿಂದನೆ ಕುರಿತ ಅಧಿಕಾರವನ್ನು ದೊಡ್ಡ ಸುತ್ತಿಗೆಯಂತೆ ಬಳಸಲಾಗುತ್ತಿದೆ. ಸಂವಿಧಾನ ಮತ್ತು ಕಾನೂನನ್ನು ರಕ್ಷಿಸಬೇಕಾದ  ಸಂಸ್ಥೆಗಳು ಎರಡಕ್ಕೂ ಬಹಿರಂಗವಾಗಿ ಕ್ಯಾರೇ ಅನ್ನದೇ ಇರುವಾಗ ನ್ಯಾಯಾಲಯಗಳೇಕೆ ನಿಸ್ಸಹಾಯಕವಾಗಿವೆ?, ಇಲ್ಲಿ ದೊಡ್ಡ ವಿಚಾರಗಳಿವೆ. ನಮಗೆ ನಿರಾಸೆಯುಂಟು ಮಾಡಿದ್ದಕ್ಕೆ ಇತಿಹಾಸವೇ ನ್ಯಾಯಾಲಯಗಳ ಕುರಿತು ತೀರ್ಪು ನೀಡುತ್ತದೆ” ಎಂದು ತಮ್ಮ ಟ್ವೀಟ್ ‍ನಲ್ಲಿ ಸಿಬಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News