ಬೆಳ್ಳಿ ನಾರಾಯಣ ಶೇರಿಗಾರ್

Update: 2020-08-29 15:47 GMT

ಉಡುಪಿ, ಆ.29: ಪ್ರಸಿದ್ಧ ಬೆಳ್ಳಿ ಕುಶಲಕರ್ಮಿ ಅಲೆವೂರು ರಾಂಪುರ ನಿವಾಸಿ ಬೆಳ್ಳಿ ನಾರಾಯಣ ಸೇರಿಗಾರ್ ಶನಿವಾರ ಮುಂಜಾನೆ ತೀವ್ರ ಹೃದಯಾಘಾತ ದಿಂದ ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಅವರು ದೇವಸ್ಥಾನ, ದೈವಸ್ಥಾನಗಳಿಗೆ ಬೆಳ್ಳಿಯ ದೇವರ ಮೂರ್ತಿ, ತಾಮ್ರ, ಕಂಚಿನ ಭೂತಾರಾಧನೆ ಪರಿಕರಗಳನ್ನು ನಿರ್ಮಿಸಿ ಕೊಡುವಲ್ಲಿ ಪ್ರಸಿದ್ಧಿ ಪಡೆದಿದ್ದರು. ಪರಿಸರದ ಹಲವು ಸಂಘ ಸಂಸ್ಥೆಗಳ ಪೋಷಕರಾಗಿದ್ದ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಪಡೆದಿದ್ದರು. ಮೃತರು ಪತ್ನಿ, ಇಬ್ಬರು ಗಂಡು, ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ