ಕೆಎಸ್ಸಾರ್ಟಿಸಿ ಚಾಲಕನಿಗೆ 1 ಸಾವಿರ ರೂ. ದಂಡ

Update: 2020-08-31 14:17 GMT

ಬೆಂಗಳೂರು, ಆ.31: ಸಂಚಾರಕ್ಕೆ ಅಡ್ಡಿಯಾಗುವಂತೆ ಬಸ್ ನಿಲುಗಡೆ ಆರೋಪ ಸಂಬಂಧ ಕೆಎಸ್ಸಾರ್ಟಿಸಿ ಬಸ್ ಚಾಲಕನಿಗೆ ಸಂಚಾರ ಪೊಲೀಸರು 1 ಸಾವಿರ ರೂ. ದಂಡ ವಿಧಿಸಿದ್ದಾರೆ.

ಬೆಂಗಳೂರಿನಿಂದ ಕೆಜಿಎಫ್‍ಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್, ಇಲ್ಲಿನ ಕೆಆರ್ ಪುರ ತೂಗು ಸೇತುವೆ ಬಳಿ ನಿಲ್ಲಿಸಿದ್ದು, ಸಂಚಾರಕ್ಕೆ ತೊಂದರೆಯಾಗಿತ್ತು. ಹೀಗಾಗಿ, ಕೆ.ಆರ್ ಪುರ ಸಂಚಾರಿ ಠಾಣೆಯ ಪೊಲೀಸರು ಬಸ್ ಚಾಲಕ ಸುಂದರಮೂರ್ತಿಗೆ 1 ಸಾವಿರ ರೂ.ದಂಡ ವಿಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News