‘ಪ್ರಣವ್ ಮುಖರ್ಜಿ ನಿಧನ ಸಂಘಪರಿವಾರಕ್ಕೆ ತುಂಬಲಾರದ ನಷ್ಟ’: ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

Update: 2020-08-31 16:59 GMT

ಹೊಸದಿಲ್ಲಿ:  ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ನಿಧನವು ‘ಸಂಘಪರಿವಾರಕ್ಕೆ ತುಂಬಲಾರದ ನಷ್ಟ’ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

“ಪ್ರಣವ್ ಮುಖರ್ಜಿಯವರು ಆರೆಸ್ಸೆಸ್ ಗೆ ಮಾರ್ಗದರ್ಶಕರಂತಿದ್ದರು. ಅವರ ನಿಧನವು ಸಂಘಪರಿವಾರಕ್ಕೆ ತುಂಬಲಾರದ ನಷ್ಟ’ ಎಂದು ಭಾಗವತ್ ಹೇಳಿದ್ದಾರೆ.

2018ರಲ್ಲಿ ಪ್ರಣವ್ ಮುಖರ್ಜಿ ಆರೆಸ್ಸೆಸ್ ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಅವರ ವಿರುದ್ಧ ಕಾಂಗ್ರೆಸ್ ನಾಯಕರು ಅಸಮಾಧಾನ ಹೊರ ಹಾಕಿದ್ದರು. ಅವರು ಕಾರ್ಯಕ್ರಮದ ಆಹ್ವಾನ ಸ್ವೀಕರಿಸಿದಂದಿನಿಂದ ಈ ಬಗ್ಗೆ ವಿವಾದ ಸೃಷ್ಟಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News