ಕತ್ತೆ ಪಾದಪೂಜೆ ಮೂಲಕ ಹುಟ್ಟುಹಬ್ಬ ಆಚರಿಸಿದ ವಾಟಾಳ್ ನಾಗರಾಜ್

Update: 2020-09-07 13:31 GMT

ಬೆಂಗಳೂರು, ಸೆ.7: ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕತ್ತೆ ಪಾದಪೂಜೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಕೆ.ಜಿ. ರಸ್ತೆಯ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡಬೇಕು ಎಂದು 1962, ಸೆಪ್ಟೆಂಬರ್ 7 ರಂದು ಹೋರಾಟ ಮಾಡಿದ್ದ ವೇಳೆ ಪೊಲೀಸರ ಬೂಟಿನೇಟು ತಿಂದಿದ್ದ ವಾಟಾಳ್ ನಾಗರಾಜ್ ಅಂದಿನಿಂದ ಸೆಪ್ಟೆಂಬರ್ 7ರಂದೇ ಹುಟ್ಟು ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆ. ಅದೇ ರೀತಿ ಇಂದು ವಾಟಾಳ್ ನಾಗರಾಜ್ ಕೊರೋನ ಭೀತಿ ಹಿನ್ನೆಲೆ ಸರಳವಾಗಿ ಕತ್ತೆ ಪಾದ ಪೂಜೆ ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯ ಸರಕಾರ ಕೊರೋನ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ. ಯಡಿಯೂರಪ್ಪ ಸರಕಾರಕ್ಕೆ ಬುದ್ಧಿ ಇಲ್ಲ. ಹೇಳೊರಿಲ್ಲ ಕೇಳೋರಿಲ್ಲ. ಈ ಪರಿಸ್ಥಿತಿ ನಿಮ್ಮ ಮನೆಯವರಿಗೆ ಬಂದಿದ್ದರೆ ಏನು ಮಾಡುತ್ತಿದ್ದಿರಿ. ನಿಮ್ಮದು ಲೂಟಿ ಸರಕಾರ ಎಂದು ಅಕ್ರೋಶ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News