ಬೆಂಗಳೂರು: ಬಹುಮಹಡಿ ಕಟ್ಟಡಕ್ಕೆ ಬಾಂಬ್ ಬೆದರಿಕೆ

Update: 2020-09-20 14:49 GMT

ಬೆಂಗಳೂರು, ಸೆ. 20: ನಿರ್ಮಾಣ ಹಂತದಲ್ಲಿರುವ ಬಹು ಮಹಡಿ ಕಟ್ಟಡಯೊಂದನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಕರೆ ಮಾಡಿರುವ ಆರೋಪ ಸಂಬಂಧ ಇಲ್ಲಿನ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೇವನಹಳ್ಳಿ ಪಟ್ಟಣದ ಅಕ್ಕಿಪೇಟೆಯಲ್ಲಿ ವೈ.ವಿ. ಕೃಷ್ಣರಾವ್ ಎಂಬುವರ ಒಡೆತನದ ಕಟ್ಟಡ ಕಾಮಗಾರಿ ನಡೆಯುತ್ತಿದೆ.
ಸೆ.11ರಂದು ಪ್ರಾಜೆಕ್ಟ್ ಸೂಪರ್ ವೈಸರ್ ವೆಂಕಟೇಶ್ ಕಟ್ಟಡ ಕಾಮಗಾರಿಯ ಪರಿಶೀಲನೆಗೆಂದು ಹೋದಾಗ ಪಿಲ್ಲರ್ ಒಂದರಲ್ಲಿ
ಸ್ಫೋಟಕ ವಸ್ತುಗಳನ್ನು ವಸ್ತುಗಳನ್ನು ಗಮನಿಸಿದ್ದಾರೆ.

ತದನಂತರ, ಮಾಲಕರಿಗೆ ಅಪರಿಚತನೊಬ್ಬ ಕರೆ ಮಾಡಿ ಈಗ ಸ್ಫೋಟಿಸಿರುವುದು ಕೇವಲ ಸ್ವಲ್ಪ ಮಾತ್ರ. 50 ಲಕ್ಷ ರೂ. ಹಣ ಕೊಡದಿದ್ದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆವೊಡ್ಡಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News