ಪಾವತಿಸದ ಅನುದಾನ: ದಿಲ್ಲಿ ವಿ.ವಿ. ಪ್ರಾಧ್ಯಾಪಕರಿಂದ ಪ್ರತಿಭಟನೆ

Update: 2020-09-28 19:18 GMT

ಹೊಸದಿಲ್ಲಿ, ಸೆ. 28: ಹೊಸದಿಲ್ಲಿ ನಗರಾಡಳಿತ ಸಂಪೂರ್ಣವಾಗಿ ಧನ ಸಹಾಯ ನೀಡುತ್ತಿರುವ 12 ಕಾಲೇಜುಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ದಿಲ್ಲಿ ವಿ.ವಿ. ಕಾಲೇಜುಗಳ ಅದ್ಯಾಪಕರು ತಮ್ಮ ಕಚೇರಿ ಕೆಲಸ ಹಾಗೂ ಆನ್‌ಲೈನ್ ಕ್ಲಾಸುಗಳನ್ನು ಬಹಿಷ್ಕರಿಸಿದ್ದಾರೆ.

ದಿಲ್ಲಿ ವಿ.ವಿ. ಪ್ರಾಧ್ಯಾಪಕರ ಸಂಘಟನೆ (ಡಿಯುಟಿಎ) ಸೋಮವಾರ ಪ್ರತಿಭಟನೆ ಆರಂಭಿಸಿದೆ. ಗಾರ್ಗಿ ಕಾಲೇಜು, ಆತ್ಮರಾಮ್ ಸನಾತನ ಧರ್ಮ ಕಾಲೇಜು ಹಾಗೂ ಇತರ ಕೆಲವು ಕಾಲೇಜುಗಳ ಬೋಧಕ ಸಿಬ್ಬಂದಿ ನಿರ್ದಿಷ್ಟ ಗುಂಪಾಗಿ ಪ್ರತಿಭಟನೆ ಮುಂದುವರಿಸಲಿದ್ದಾರೆ. ಈ ಪ್ರತಿಭಟನೆ ಅಕ್ಟೋಬರ್ 1ರ ವರೆಗೆ ಮುಂದುವರಿಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News