ಆ ಚಿಂತಕ!

Update: 2020-10-02 19:30 GMT
Editor : -ಮಗು

ಮೊದಲು ಆ ಚಿಂತಕನನ್ನು ಕೊಲ್ಲಲಾಯಿತು. ಬಳಿಕ ಆತನ ಕೃತಿಗಳನ್ನು ಹಂತಹಂತವಾಗಿ ನಾಶ ಮಾಡಲಾಯಿತು.

ಅನಂತರ ಆ ಚಿಂತಕನ ಕುರಿತಂತೆ ಮಾತನಾಡುವವರ ನಾಲಗೆಗಳನ್ನು ಕತ್ತರಿಸಲಾಯಿತು.
ಹಲವರನ್ನು ಜೈಲಿಗೆ ತಳ್ಳಿ ಶಾಶ್ವತವಾಗಿ ದಫನಮಾಡಲಾಯಿತು.
ಚಿಂತಕನ ವಿಚಾರಗಳನ್ನು ಬೇರು ಸಹಿತ ಕಿತ್ತು ಹಾಕಲಾಯಿತು.
ಎಲ್ಲ ಆದ ಬಳಿಕ....
ಆ ಚಿಂತಕನ ಬೃಹತ್ ಪ್ರತಿಮೆಯನ್ನು ನಿರ್ಮಿಸಲಾಯಿತು. ಆ ಚಿಂತಕನ ಪ್ರತಿಮೆಯ ಅಡಿಯಲ್ಲಿ ಬೃಹತ್ ಜಾತ್ರೆಗೆ ಸರಕಾರ ಕೋಟಿಗಟ್ಟಲೆ ಹಣವನ್ನು ಬಿಡುಗಡೆ ಮಾಡಿತು. ಚಿಂತಕನ ಅನುಯಾಯಿಗಳೆಲ್ಲ ಈಗ ಸಂಭ್ರಮಿಸಿದರು. ಸರಕಾರಕ್ಕೆ ಚಿಂತಕನ ಮೇಲಿರುವ ಪ್ರೀತಿಯನ್ನು ಕೊಂಡಾಡಿದರು.

Writer - -ಮಗು

contributor

Editor - -ಮಗು

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಹರಾಜು !