ಕೊರೋನ ಸೋಂಕು ದೃಢ: ಪತ್ನಿಗೆ ಪತ್ರ ಬರೆದು, ಪತಿ ಪರಾರಿ!

Update: 2020-10-08 13:27 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.8: ಕೊರೋನ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ವ್ಯಕ್ತಿಯೋರ್ವ ತನ್ನ ಪತ್ನಿಗೆ ಪತ್ರವೊಂದನ್ನು ಬರೆದು ಪರಾರಿಯಾಗಿರುವ ಘಟನೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರಿನ ಉತ್ತರಹಳ್ಳಿಯಲ್ಲಿ ವಾಸವಾಗಿದ್ದ ವ್ಯಕ್ತಿಗೆ ಇತ್ತೀಚಿಗೆ ಕೊರೋನ ಸೋಂಕು ತಗುಲಿದೆ. ಇದರ ಬೆನ್ನಲ್ಲೇ ಆತ ಆಂಧ್ರದ ಚಿತ್ತೂರಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ತನ್ನ ಪತ್ರ ಬರೆದಿದ್ದು, ನಾನು ಬದುಕುವುದು ಅನುಮಾನ. ಮಕ್ಕಳ ಬಗ್ಗೆ ಗಮನ ನೀಡು ಎಂದು ಉಲ್ಲೇಖಿಸಿದ್ದಾನೆ. 

ಇನ್ನು ಘಟನೆ ಸಂಬಂಧ ಪತ್ನಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಸದ್ಯ ಆಂಧ್ರ ಪೊಲೀಸರಿಗೆ ಮಾಹಿತಿ ರವಾನೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News