ಕೂಡಲೇ ಪಿಯು ಉಪನ್ಯಾಸಕರಿಗೆ ಆದೇಶ ಪತ್ರ ನೀಡಿ: ಎಐಡಿಎಸ್‍ಒ ಆಗ್ರಹ

Update: 2020-10-16 14:49 GMT

ಬೆಂಗಳೂರು, ಅ.16: 2018ರಲ್ಲಿ ನೇಮಕಾತಿಯಾದಂತಹ ಪಿಯು ಉಪನ್ಯಾಸಕರಿಗೆ ಹುದ್ದೆಯ ಆದೇಶ ಪತ್ರವನ್ನು ಕೂಡಲೇ ನೀಡಬೇಕೆಂದು ಎಐಡಿಎಸ್‍ಒ ರಾಜ್ಯ ಕಾರ್ಯದರ್ಶಿ ಅಜಯ್ ಕಾಮತ್ ಆಗ್ರಹಿಸಿದ್ದಾರೆ.

ನೇಮಕಾತಿ ಆದೇಶ ಪ್ರತಿಗಾಗಿ ಆಗ್ರಹಿಸಿ ಪಿಯು ಉಪನ್ಯಾಸಕರು ಪಿಯು ಮಂಡಳಿ ಮುಂಭಾಗ ನಡೆಸುತ್ತಿರುವ ಧರಣಿಯನ್ನು ಬೆಂಬಲಿಸಿ ಮಾತನಾಡಿದ ಅವರು, 2018ರಲ್ಲಿ ನೇಮಕಾತಿಯಾಗಿರುವ ಎಲ್ಲ ಉಪನ್ಯಾಸಕರು ಗ್ರಾಮೀಣ ಭಾಗದ ಕಾಲೇಜಿಗೆ ನಿಯೋಜನೆಗೊಂಡಿದ್ದಾರೆ ಎಂದರು.

ನಗರಗಳ ಪಿಯು ಕಾಲೇಜುಗಳಲ್ಲಿ ಈಗಾಗಲೇ ಆನ್‍ಲೈನ್ ತರಗತಿಗಳು, ಯೂಟ್ಯೂಬ್ ತರಗತಿಗಳನ್ನು ನಡೆಸಲಾಗುತ್ತಿದೆ. ಹಾಗೂ ಪಿಯು ಮಂಡಳಿ ಕೋವಿಡ್-19 ಹಿನ್ನೆಲೆಯಲ್ಲಿ ಹೊರಡಿಸಿರುವ ಸುತ್ತೋಲೆಯಂತೆ ಪಿಯುಸಿ ಪ್ರೀ ರೆಕಾರ್ಡಿಂಗ್ ವೀಡಿಯೋ ತರಗತಿಗಳನ್ನು ನಡೆಯುತ್ತಿವೆ. ಇವೆಲ್ಲಾ ಸೌಲಭ್ಯಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಸಿಗಬೇಕಾದರೆ ಪಿಯು ಉಪಸ್ಯಾಸಕರಿಗೆ ನೇಮಕಾತಿ ಆದೇಶ ಪ್ರತಿಯನ್ನು ಕೂಡಲೇ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News