ಮಂಗಳಮುಖಿಯರ ಕಲಾತ್ಮಕ ಪ್ರತಿಭೆಯಿಂದ ಅರಳಿತು 'ಕೋವಿಡ್ ವಾರಿಯರ್ಸ್' ಚಿತ್ರ

Update: 2020-10-16 15:48 GMT

ಬೆಂಗಳೂರು, ಅ.16: ಮಂಗಳಮುಖಿಯರ ಕಲಾತ್ಮಕ ಪ್ರತಿಭೆಯಿಂದ ಈಗ ವಿವೇಕಾನಂದ ಮೆಟ್ರೋ ನಿಲ್ದಾಣದ ಗೋಡೆಗಳು ಬಣ್ಣ ಬಣ್ಣಗಳಿಂದ ಕಂಗೊಳಿಸುತ್ತಿವೆ. ಆ ಬಣ್ಣಗಳಲ್ಲಿ ಕೋವಿಡ್ ವಾರಿಯರ್ಸ್ ನ ಶ್ರಮದ ಚಿತ್ರಗಳನ್ನು ಬಿಡಿಸಲಾಗಿದೆ.

‘ಅರವಾಣಿ ಆರ್ಟ್ ಪ್ರಾಜೆಕ್ಟ್’ನ ಮಂಗಳಮುಖಿ ಸ್ವಯಂ ಸೇವಕರು ಮೆಟ್ರೋ ನಿಲ್ದಾಣದಲ್ಲಿ ಈ ಚಿತ್ರಗಳನ್ನು ಬಿಡಿಸಿದ್ದಾರೆ. ಇಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಸಂಸದ ಪಿ.ಸಿ ಮೋಹನ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ನಮ್ಮ ಮೆಟ್ರೋ ನಿರ್ದೇಶಕ ಅಜೇಯ್ ಸೇಥ್, ಚಿತ್ರ ನಟಿ ಸಂಯುಕ್ತ ಹೊರನಾಡ್ ಇದನ್ನು ಅನಾವರಣಗೊಳಿಸಿದರು.

ಕೋವಿಡ್-19 ಸಮಯದಲ್ಲಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ಕಾರ್ಮಿಕರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಬಿಬಿಎಂಪಿ ಪೌರಕಾರ್ಮಿಕರ ಶ್ರಮಕ್ಕೆ ಗೌರವ ಸಲ್ಲಿಸುವ ಸಲುವಾಗಿ ಈ ಭಿತ್ತಿ ಚಿತ್ರಗಳನ್ನು ಬಿಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News