ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ 6 ವರ್ಷದ ಬಾಲಕನ ಕೊಲೆಗೈದ ಚಿಕ್ಕಪ್ಪ

Update: 2020-10-23 13:38 GMT

ಬೆಂಗಳೂರು, ಅ.23: ಹಳೇ ದ್ವೇಷ ಹಿನ್ನೆಲೆಯಲ್ಲಿ ಅಣ್ಣನ 6 ವರ್ಷದ ಮಗನನ್ನು ಕೊಲೆಗೈದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದ ದಾನೋಜಿಪಾಳ್ಯದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ರಿಯಾನ್(6) ಮೃತ ಬಾಲಕ ಎಂದು ಪೊಲೀಸರು ಗುರುತಿಸಿದ್ದು, ಬಾಲಕನ ಚಿಕ್ಕಪ್ಪ ದಾದಾಪೀರ್ ಎಂಬಾತ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.

ಚಮನ್ ಹಾಗೂ ಆಯಿಷಾ ದಂಪತಿಯ ಮಗನಾಗಿರುವ ರಿಯಾನ್ ನನ್ನು ಹಳೇ ದ್ವೇಷದ ಹಿನ್ನೆಲೆ ಆರೋಪಿ ದಾದಾಪೀರ್ ಹಲ್ಲೆ ನಡೆಸಿ, ನೀರಿನ ಟ್ಯಾಂಕ್‍ನಲ್ಲಿ ಮುಳುಗಿಸಿ ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ನೆಲಮಂಗಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News