ಆಂಬುಲೆನ್ಸ್ ನಲ್ಲಿ ಬಂದು ಕಳ್ಳತನಕ್ಕೆ ಯತ್ನ

Update: 2020-10-23 13:22 GMT

ಬೆಂಗಳೂರು, ಅ.23: ಆಂಬುಲೆನ್ಸ್ ಮೂಲಕ ಬಂದ ದುಷ್ಕರ್ಮಿಗಳು ಕಂಪೆನಿಯೊಂದಕ್ಕೆ ನುಗ್ಗಿ ಕಳವು ಯತ್ನ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಜಯನಗರದಲ್ಲಿರುವ ಉಪ್ಕಾರ್ ಡೆವಲಪರ್ಸ್ ಕಂಪೆನಿಗೆ ಆಂಬುಲೆನ್ಸ್ ನಲ್ಲಿ ಬಂದ ದುಷ್ಕರ್ಮಿಗಳು, ಬಾಗಿಲು ಒಡೆದು ಒಳಗೆ ನುಗ್ಗಿ ಸಿಸಿಟಿವಿಗೆ ಬಣ್ಣ ಬಳಿದು ಕಳ್ಳತನಕ್ಕೆ ಯತ್ನಿಸಿದ್ದಾರೆ ಎನ್ನಲಾಗಿದೆ.

ಆದರೆ, ಕಂಪೆನಿ ಕಚೇರಿಯಲ್ಲಿ ಯಾವುದೇ ನಗದು ಇರಲ್ಲ ಎಂದು ತಿಳಿದುಬಂದಿದೆ.

ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ಸಿದ್ದಾಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News