ದರೋಡೆಗೆ ಸಂಚು ಆರೋಪ: ರೌಡಿ ಕಾರ್ತಿಕ್ ಸೇರಿ ನಾಲ್ವರ ಬಂಧನ

Update: 2020-10-29 14:09 GMT

ಬೆಂಗಳೂರು, ಅ.29: ಜ್ಞಾನಭಾರತಿಯ ರೈಲ್ವೆ ಬಡಾವಣೆ ಬಳಿ ದರೋಡೆಗೆ ಸಜ್ಜಾಗಿದ್ದ ಆರೋಪದಡಿ ರೌಡಿ ಕಾರ್ತಿಕ್ ಸೇರಿ ನಾಲ್ವರನ್ನು ಸಿಸಿಬಿ ಬಂಧಿಸಲಾಗಿದೆ.

ಉಲ್ಲಾಳು ಉಪನಗರದ ಕಾರ್ತಿಕ್(32), ಹೇಮಂತ್ ಕುಮಾರ್(36), ಅಂದ್ರಹಳ್ಳಿಯ ಶಿವಸ್ವಾಮಿ(35), ಯಲಹಂಕದ ಪ್ರಭಾತ್(28) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ಕಾರ್ತಿಕ್, 5 ಕೊಲೆ ಸೇರಿದಂತೆ ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಗರವಲ್ಲದೆ ಹಾಸನ, ಶಿವಮೊಗ್ಗ ಹಾಗೂ ರಾಮನಗರ ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. ಬ್ಯಾಡರಹಳ್ಳಿಯ ಮತ್ತೊಬ್ಬ ರೌಡಿ ಹೇಮಂತ್ ವಿರುದ್ಧ 2 ಕೊಲೆ, ದರೋಡೆ, ಕಳವು ಪ್ರಕರಣ ದಾಖಲಾಗಿದೆ.

ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News