ಕೆ. ಅಬ್ದುಲ್ ರಹ್ಮಾನ್
Update: 2020-11-18 09:17 GMT
ಮಂಗಳೂರು : ನಗರದ ಬಿಕರ್ನಕಟ್ಟೆ ನಿವಾಸಿ, ದಿ. ಅಬ್ದುಲ್ ಖಾದರ್ ಕಿಲ್ಪಡಿ ಅವರ ಪುತ್ರ ಕೆ. ಅಬ್ದುಲ್ ರಹ್ಮಾನ್ (89) ಅವರು ಅಲ್ಪಕಾಲದ ಅಸೌಖ್ಯದಿಂದ ಬಿಕರ್ನಕಟ್ಟೆ ನಿವಾಸದಲ್ಲಿ ಇತ್ತೀಚೆಗೆ ನಿಧನರಾದರು.
ಅಬ್ದುಲ್ ರಹ್ಮಾನ್ ಅವರು ಖಾಸಗಿ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸಿ, ನಿವೃತ್ತರಾಗಿದ್ದರು. ಸಾಮಾಜಿಕವಾಗಿ ಹಾಗು ಧಾರ್ಮಿಕವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಶಾಮಿರ್ ಮಸೀದಿಯ ಕಮಿಟಿಯಲ್ಲಿ ಪದಾಧಿಕಾರಿಯಾಗಿದ್ದರು.
ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.