ಮರಕ್ಕೆ ಢಿಕ್ಕಿಯಾದ ಸರಕಾರಿ ಬಸ್, ಚಾಲಕ ಮೃತ್ಯು

Update: 2020-11-30 05:58 GMT

ಕೊಚ್ಚಿ: ಕೇರಳ ರಾಜ್ಯ ಸಾರಿಗೆ ಸಂಸ್ಥೆಗೆ (ಕೆಎಸ್‌ಆರ್‌ಟಿಸಿ)ಸೇರಿದ ಬಸ್ ಸೋಮವಾರ ಬೆಳಗ್ಗಿನ ಜಾವ ಅಪಘಾತಕ್ಕೀಡಾದ ಪರಿಣಾಮ, ಓರ್ವ ಸಾವನ್ನಪ್ಪಿದರೆ, 20ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡಿದ್ದಾರೆ.

ನಿಯಂತ್ರಣ ತಪ್ಪಿದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಚಾಲಕ ಮೃತಪಟ್ಟಿದ್ದು, ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

  ಬಸ್ ಕಂಡಕ್ಟರ್ ಸಹಿತ ಮೂವರ ಸ್ಥಿತಿ ಗಂಭೀರವಾಗಿದೆ. ಕೊಚ್ಚಿಯ ವೈಟಿಲ್ಲಾ ಟ್ರಾನ್ಸ್‌ಪೋರ್ಟ್ ಹಬ್‌ನಿಂದ 2 ಕಿ.ಮೀ.ದೂರದಲ್ಲಿ ಬಸ್ ಅಪಘಾತಕ್ಕೆ ಒಳಗಾಗುವ ಮೊದಲು ಸಾರಿಗೆ ಟರ್ಮಿನಲ್‌ನಲ್ಲಿ ಸುಮಾರು 5-10 ನಿಮಿಷ ವಿರಾಮ ಪಡೆದು ಮುಂದೆ ಸಾಗಿತ್ತು ಎಂದು ಕೆಎಸ್‌ಆರ್‌ಟಿಸಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News