ರೈತರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ: ಕಂಗನಾ ವಿರುದ್ಧ ರಾಜ್ಯ ಕಿಸಾನ್ ಕಾಂಗ್ರೆಸ್ ದೂರು

Update: 2020-12-06 13:37 GMT

ಬೆಂಗಳೂರು, ಡಿ. 6: ರೈತರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಕರ್ನಾಟಕ ಕಿಸಾನ್ ಸಮಿತಿ ಕಾಂಗ್ರೆಸ್ ದೂರು ಸಲ್ಲಿಕೆ ಮಾಡಿದೆ.

ರವಿವಾರ ಸಮಿತಿ ಅಧ್ಯಕ್ಷ ಸಚಿನ್ ಮಿಗಾ ದೂರು ಸಲ್ಲಿಸಿದ್ದು, ಹೊಸದಿಲ್ಲಿಯಲ್ಲಿ ಹೋರಾಟ ನಡೆಸುತ್ತಿರುವ ರೈತಪರ ಸಂಘಟನೆಯ 73 ವರ್ಷದ ರೈತ ಮಹಿಳೆಯನ್ನು 100 ರೂಪಾಯಿಗೆ 'ಅವಳು ಸಿಗುತ್ತಾಳೆ' ಎಂದು ನಟಿ ಕಂಗನಾ ಅವಹೇಳನಕಾರಿ ಮಾತುಗಳನ್ನು ಆಡಿದ್ದಾರೆ. ಈಕೆ ಈ ಹಿಂದೆಯೂ ಕೇಂದ್ರ ಕೃಷಿ ಕಾಯ್ದೆ ವಿರುದ್ಧ ರೈತ ಹೋರಾಟ ನಡೆಸಿದವರನ್ನು ಭಯೋತ್ಪಾದಕರೆಂದು ಉಲ್ಲೇಖಿಸಿ ಜನಾಕ್ರೋಶಕ್ಕೆ ಗುರಿಯಾಗಿದ್ದರು. ಹೀಗೆ, ಪದೇ ಪದೇ ಅನ್ನದಾತರ ಬಗ್ಗೆ ಅವಹೇಳಕಾರಿ ಮಾತುಗಳನ್ನು ಆಡುತ್ತಿರುವ ಕಂಗನಾ ವಿರುದ್ಧ ರಾಷ್ಟ್ರೀಯ ಗೌರವ ಕಾಯ್ದೆ, 1971ರ ಅವಮಾನಗಳ ತಡೆಗಟ್ಟುವಿಕೆ, ಐಪಿಸಿ ಕಾಯ್ದೆ 509, 304ರ ಅಡಿಯಲ್ಲಿ ಮೊಕದ್ದಮೆ ದಾಖಲಿಸಿ ಬಂಧಿಸಬೇಕು. ಜತೆಗೆ ಈಕೆಗೆ ನೀಡಿರುವ ಭದ್ರತೆ ವಾಪಸ್ಸು ಪಡೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News