ಬಂಗಾಳ ತಂಡದಲ್ಲಿ ಶಮಿ ಸಹೋದರನಿಗೆ ಸ್ಥಾನ
Update: 2021-01-01 18:21 GMT
ಕೋಲ್ಕತಾ, ಜ.1: ಮುಂಬರುವ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ-20 ಟೂರ್ನಮೆಂಟ್ನಲ್ಲಿ ಹಿರಿಯ ಬ್ಯಾಟ್ಸ್ ಮನ್ ಅನುಸ್ತುಪ್ ಮಜೂಂದಾರ್ ಬಂಗಾಳ ಕ್ರಿಕೆಟ್ ತಂಡದ ನಾಯಕನಾಗಿ ನೇಮಕವಾಗಿದ್ದು, ಅಭಿಮನ್ಯು ಈಶ್ವರನ್ರಿಂದ ತೆರವಾದ ಸ್ಥಾನ ತುಂಬಿದ್ದಾರೆ. ಶ್ರೀವಾಸ್ತವ ಗೋಸಾ್ವಮಿ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಇದೇ ವೇಳೆ ಭಾರತದ ಹಿರಿಯ ವೇಗದ ಬೌಲರ್ ಮುಹಮ್ಮದ್ ಶಮಿ ಅವರ ಕಿರಿಯ ಸಹೋದರ ವೇಗದ ಬೌಲಿಂಗ್ ಆಲ್ರೌಂಡರ್ ಮುಹಮ್ಮದ್ ಕೈಫ್ ಟ್ವೆಂಟಿ-20 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.