ತವರಿಗೆ ಆಗಮಿಸಿದ ಅಝರುದ್ದೀನ್‌ ಗೆ ಭರ್ಜರಿ ಸ್ವಾಗತ

Update: 2021-01-25 19:22 GMT

 ಕಾಸರಗೋಡು: ಸಯ್ಯದ್ ಮುಷ್ತ್ತಾಕ್ ಅಲಿ ಟ್ವೆಂಟಿ 20 ಕ್ರಿಕೆಟ್ ಪಂದ್ಯಾಟದಲ್ಲಿ ಅತೀ ವೇಗದ ಶತಕ ಗಳಿಸಿದ ಕೇರಳ ತಂಡದ ಆಟಗಾರ ಮುಹಮ್ಮದ್ ಅಝರುದ್ದೀನ್ ಸೋಮವಾರ ಹುಟ್ಟೂರಾದ ಕಾಸರಗೋಡಿಗೆ ಆಗಮಿಸಿದ್ದು, ಅವರಿಗೆ ಭವ್ಯ ಸ್ವಾಗತ ನೀಡಲಾಯಿತು.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅಝರುದ್ದೀನ್ ಅವರನ್ನು ಕುಟುಂಬಸ್ಥರು, ಸ್ನೇಹಿತರು ಬರಮಾಡಿಕೊಂಡರು .

ಬಳಿಕ ತಾಲಿಪಡ್ಪುವಿನಿಂದ ಮೆರವಣಿಗೆ ಮೂಲಕ ಹುಟ್ಟೂರಾದ ತಳಂಗರೆಗೆ ಬರಮಾಡಿಕೊಳ್ಳಲಾಯಿತು .

ಶಾಸಕ ಎನ್.ಎ ನೆಲ್ಲಿಕುನ್ನು, ಟಿ.ಇ. ಅಬ್ದುಲ್ಲ ಮತ್ತಿತರರು ಉಪಸ್ಥಿತರಿದ್ದರು.

ಅಝರುದ್ದೀನ್‌ರಿಗೆ ಜ.26ರಂದು ಕಾಸರಗೋಡು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ಪೌರ ಸನ್ಮಾನ ಆಯೋಜಿಸಲಾಗಿದೆ.

ಸಂಜೆ 6:30ಕ್ಕೆ ಕಾಸರಗೋಡು ನಗರ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್ ಉದ್ಘಾಟಿಸುವರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News