ಉ.ಪ್ರದೇಶ:ಮಹಿಳೆ ರೈಲಿಗೆ ಸಿಲುಕುವುದನ್ನು ತಪ್ಪಿಸುವ ಯತ್ನದಲ್ಲಿ ಕಾನ್‌ಸ್ಟೇಬಲ್ ಸಾವು

Update: 2021-03-03 14:08 GMT
ಸಾಂದರ್ಭಿಕ ಚಿತ್ರ

ಕೌಶಾಂಬಿ,ಮಾ.3: ಮಹಿಳೆಯನ್ನು ರಕ್ಷಿಸಲು ಪ್ರಯತ್ನಿಸಿದ್ದ ರೈಲ್ವೆ ರಕ್ಷಣಾ ಪಡೆಯ ಹೆಡ್ ಕಾನ್‌ಸ್ಟೇಬಲ್‌ವೋರ್ವರು ರೈಲು ಬಡಿದು ಸಾವನ್ನಪ್ಪಿದ ದುರಂತ ಘಟನೆ ಇಲ್ಲಿಯ ಕೊಖ್ರಾಜ್ ಪ್ರದೇಶದ ಭರ್ವಾರಿ ರೈಲು ನಿಲ್ದಾಣದಲ್ಲಿ ಸಂಭವಿಸಿದೆ.

ಮಂಗಳವಾರ ರಾತ್ರಿ ನಿರ್ಮಲಾದೇವಿ (40) ಎಂಬ ಮಹಿಳೆ ರೈಲುಹಳಿಗಳನ್ನು ದಾಟುತ್ತಿದ್ದಳು. ಇದೇ ವೇಳೆ ಪ್ರಯಾಗರಾಜ್-ದಿಲ್ಲಿ ರೈಲು ನಿಲ್ದಾಣವನ್ನು ಪ್ರವೇಶಿಸುತ್ತಿತ್ತು. ಅಪಾಯವನ್ನು ಮನಗಂಡ ಹೆಡ್ ಕಾನ್‌ಸ್ಟೇಬಲ್ ಜ್ಞಾನಚಂದ್ ಆಕೆಯನ್ನು ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ರೈಲು ಬಡಿದು ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಎಸ್‌ಪಿ ಸಮರ ಬಹಾದುರ್ ಸಿಂಗ್ ಅವರು ಬುಧವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ನಿರ್ಮಲಾದೇವಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆಕೆಯ ದೇಹಸ್ಥಿತಿ ಸ್ಥಿರವಾಗಿದೆ. ಘಟನೆಯ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News