ʼಬಂಗಾಳದ ನೈಜ ಹುಲಿʼ ಮಮತಾ ಬ್ಯಾನರ್ಜಿಗೆ ಶಿವಸೇನೆ ಬೆಂಬಲ ನೀಡಲಿದೆ: ಸಂಜಯ್‌ ರಾವತ್‌ ಹೇಳಿಕೆ

Update: 2021-03-04 09:17 GMT

ಹೊಸದಿಲ್ಲಿ: ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತನ್ನ ನಿಲುವೇನೆಂದು ಶಿವಸೇನೆ ಕೊನೆಗೂ ಸ್ಪಷ್ಟಪಡಿಸಿದೆ. "ಪಶ್ಚಿಮ ಬಂಗಾಳದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ನಾವು ಸ್ಫರ್ಧಿಸುವುದಿಲ್ಲ. ಬಂಗಾಳದ ನೈಜ ಹುಲಿಯಾಗಿರುವ ಮಮತಾ ಬ್ಯಾನರ್ಜಿಗೆ ನಾವು ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ ಎಂದು ಶಿವಸೇನೆ ಮುಖಂಡ ಸಂಜಯ್‌ ರಾವತ್‌ ಹೇಳಿಕೆ ನೀಡಿದ್ದಾರೆ. 

"ಹಲವಾರು ಮಂದಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಶಿವಸೇನೆಯ ಸ್ಪರ್ಧೆಯ ಕುರಿತು ಕುತೂಹಲಭರಿತರಾಗಿದ್ದಾರೆ. ಈ ಕುರಿತಾದಂತೆ ಪಕ್ಷದ ಅಧ್ಯಕ್ಷ ಉದ್ಧವ್‌ ಠಾಕ್ರೆಯವರೊಂದಿಗೆ ಚರ್ಚಿಸಿ ತೀರ್ಮಾನಕ್ಕೆ ಬರಲಾಗಿದೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸುವಾಗ ದೀದಿ ವಿರುದ್ಧ ಉಳಿದವರೆಲ್ಲಾ ಸ್ಫರ್ಧಿಸುತ್ತಿದ್ದಾರೆ. ಹಣ, ಬಲ ಮತ್ತು ಮಾಧ್ಯಮಗಳನ್ನು ದೀದಿಯ ವಿರುದ್ಧ ಬಳಸಲಾಗುತ್ತಿದೆ. ಆದ್ದರಿಂದ ಶಿವಸೇನೆಯು ಬಂಗಾಳದಲ್ಲಿ ಸ್ಫರ್ಧಿಸದೇ, ದೀದಿಯೊಂದಿಗೆ ನಿಲ್ಲಲಿದೆ. ಘರ್ಜನೆಯೊಂದಿಗಿನ ಯಶಸ್ಸು ದೀದಿಗೆ ಸಿಗಲಿ ಎಂದು ನಾವು ಹಾರೈಸುತ್ತೇವೆ. ಮಮತಾ ದೀದಿ ನಿಜವಾದ ಬಂಗಾಳದ ಹುಲಿಯಾಗಿದ್ದಾರೆ" ಎಂದು ರಾವತ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News