ಉದಯಕುಮಾರ ದೇವಾಡಿಗ

Update: 2021-05-27 17:52 GMT

ಬೆಳ್ತಂಗಡಿ: ಪಿಲ್ಯ ಗ್ರಾಮದ ನಡಾಯಿ ಮನೆಯ ಉದಯಕುಮಾರ ದೇವಾಡಿಗ (54) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ರಾತ್ರಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ‌ ನಿಧನರಾದರು. ಕಳೆದ ಎರಡು ವಾರಗಳಿಂದ ಇವರು ಅನಾರೋಗ್ಯಕ್ಕೆ  ತುತ್ತಾಗಿ ವಿವಿಧ ಆಸ್ಪತ್ರೆಗಳಲಿ ಚಿಕಿತ್ಸೆ ಪಡೆದಿದ್ದರು. ಇವರಿಗೆ ಕೊರೋನ ದೃಢಪಟ್ಟ ಹಿನ್ನಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. 

ತಂದೆ ಪ್ರಸಿದ್ಧ ನಾಗಸ್ವರ ವಾದಕ ಸುಂದರ ದೇವಾಡಿಗ ಅವರು ಮೇ 12 ರಂದು ನಿಧನರಾಗಿದ್ದು, ಇದೀಗ 15 ದಿನದ ಅಂತರದಲ್ಲಿ ಅವರ ಪುತ್ರ ಮೃತಪಟ್ಟಿದ್ದಾರೆ. ಉದಯ ಅವರು ಅಳದಂಗಡಿ ಪೇಟೆಯಲ್ಲಿ ಸ್ಟೇಶನರಿ ಅಂಗಡಿಯನ್ನು ನಡೆಸುತ್ತಿದ್ದರಲ್ಲದೆ, ತಂದೆಯಂತೆ ನಾಗಸ್ವರ ನುಡಿಸುವ ಅಭ್ಯಾಸ ಹೊಂದಿದ್ದರು. ಮೃತರು ಪತ್ನಿ, ಪುತ್ರನನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ