ಶಾಸಕ ಝಮೀರ್ ಅಹ್ಮದ್ ಮನೆ ಮೇಲೆ ಇ.ಡಿ. ದಾಳಿ ಖಂಡನೀಯ: ಡಿ.ಕೆ.ಶಿವಕುಮಾರ್

Update: 2021-08-05 07:38 GMT

ಹೊಸದಿಲ್ಲಿ : ಶಾಸಕ ಝಮೀರ್ ಅಹ್ಮದ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ಖಂಡನೀಯ. ಇ.ಡಿ ದಾಳಿಯಿಂದ ಝಮೀರ್ ಅವರಿಗೆ ಕಿರುಕುಳವಾಗುತ್ತಿದೆ. ಈ ಸಮಯದಲ್ಲಿ ಇಡಿ ದಾಳಿ ಅಗತ್ಯವಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ದಿಲ್ಲಿಯಲ್ಲಿ ಗುರುವಾರ ಬೆಳಗ್ಗೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಂತರ ಮಾತನಾಡಿದ ಅವರು ಬಿಜೆಪಿ ನಾಯಕರ ಮೇಲೆ ದಾಳಿ ಮಾಡುವುದಿಲ್ಲ ಯಾಕೆ ? ಕಾಂಗ್ರೆಸ್ ಗೊಂದು, ಬಿಜೆಪಿಗೊಂದು ನ್ಯಾಯ ಮಾಡಬಾರದು. ಬಿಜೆಪಿಯವರು ಬಹಳ ಪವಿತ್ರರಾಗಿದ್ದಾರೆಯೇ ? ಕಾನೂನು ಚೌಕಟ್ಟಿನಲ್ಲಿ ಏನು ಬೇಕಾದರೂ ಮಾಡಲಿ. ಕಾನೂನು ಹೋರಾಟ ಮಾಡಲು ಝಮೀರ್ ಸಮರ್ಥರಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News