ಭಾರತ್ ಬಂದ್; ಕರ್ತವ್ಯದಲ್ಲಿದ್ದ ಐಪಿಎಸ್ ಅಧಿಕಾರಿಯ ಕಾಲಿನ ಮೇಲೆ ಹರಿದ ಕಾರು

Update: 2021-09-27 12:54 GMT

photo: twitter@DarshanDevaiahB
 

ಬೆಂಗಳೂರು: ರೈತ ಸಂಘದ ಮುಖಂಡರೊಬ್ಬರ ಕಾರು ಕರ್ತವ್ಯನಿರತ ಹಿರಿಯ ಪೊಲೀಸ್ ಅಧಿಕಾರಿ ಮೇಲೆ ಹರಿದಿರುವ ಘಟನೆ ಸೋಮವಾರ ಇಲ್ಲಿನ ಗೊರಗುಂಟೆಪಾಳ್ಯ ಸಮೀಪದ ಸಿಎಂಟಿಐ ಜಂಕ್ಷನ್‍ನಲ್ಲಿ ನಡೆದಿದೆ. 

ಕಾರು ಗುದ್ದಿದ ರಭಸಕ್ಕೆ ಉತ್ತರ ವಿಭಾಗದ ಡಿಸಿಪಿ ದರ್ಮೇದ್ರಕುಮಾರ್ ಮೀನಾ ಅವರ ಕಾಲಿಗೆ ಗಾಯವಾಗಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಭಾರತ್ ಬಂದ್ ಹಿನ್ನೆಲೆಯಲ್ಲಿ ರಾಜ್ಯದ ಹೊರ ಭಾಗಗಳಿಂದ ಬರುವ ರೈತರನ್ನು ತಡೆಯಲು ಗೊರಗುಂಟೆಪಾಳ್ಯದ ಸಿಎಂಟಿಐ ಜಂಕ್ಷನ್‍ನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಭದ್ರತೆ ನಿಯೋಜಿಸಲಾಗಿದ್ದ ಪೊಲೀಸರೊಂದಿಗೆ ಮೀನಾ ಅವರು ಮಾತನಾಡುತ್ತಿದ್ದಾಗ ಏಕಾಏಕಿ ಬಂದ ಕಾರು ಅವರ ಮೇಲೆ ಹರಿಯಿತು ಎನ್ನಲಾಗಿದೆ.

ಕಾರು ಹರಿಸಿದ ಕಾರು ಹಾಗೂ ಚಾಲಕನನ್ನು ಯಶವಂತಪುರ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News