ಬೆಂಗಳೂರು: ಕುಸಿಯುವ ಹಂತದಲ್ಲಿ ಇನ್ನೊಂದು ಕಟ್ಟಡ; ನಿವಾಸಿಗಳ ಸ್ಥಳಾಂತರ

Update: 2021-10-13 06:39 GMT
photo: twitter@GopalaiahK
 

ಬೆಂಗಳೂರು: ರಾತ್ರಿ ಸುರಿದ ಭಾರೀ ಮಳೆಗೆ ನಗರದ ಕಮಲಾನಗರದ ಶಂಕರ್ ನಾಗ್ ಬಸ್ಸು ನಿಲ್ದಾಣ ಸಮೀಪದ ಮೂರು ಅಂತಸ್ತಿನ ಕಟ್ಟಡವೊಂದು ಕುಸಿಯುವ ಹಂತದಲ್ಲಿದ್ದು, ಆತಂಕಗೊಂಡ ನಿವಾಸಿಗಳು ಹೊರಗಡೆ ಓಡಿ ಬಂದಿದ್ದಾರೆ. 

ಕಟ್ಟಡ ವಾಲುತ್ತಿದ್ದಂತೆ ಮಾಹಿತಿ ತಿಳಿದ ನಿವಾಸಿಗಳು ತಡ ರಾತ್ರಿಯೇ ಸ್ಥಳಾಂತರಗೊಂಡಿದ್ದು, ಮುಂಜಾಗ್ರತಾ ಕ್ರಮವಾಗಿ ಅಕ್ಕಪಕ್ಕದ ಮನೆಗಳನ್ನೂ ತೆರವುಗೊಳಿಸಲಾಗಿದೆ.

ಸ್ಥಳಕ್ಕೆ ಸಚಿವ ಗೋಪಾಳಯ್ಯ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚೆ ನಡೆಸಿದ್ದಾರೆ.

ಎನ್‌ಡಿ‌ಆರ್‌ಎಫ್ ತಂಡ, ಬಿಬಿಎಂಪಿ ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಕಟ್ಟಡವನ್ನು ನೆಲಸಮಗೊಳಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News