ಮಂಗಳೂರು: ಬಾಲ ಯೇಸುವಿನ ವಾರ್ಷಿಕ ಮಹೋತ್ಸವ ಆಚರಣೆ
Update: 2022-01-14 15:30 GMT
ಮಂಗಳೂರು: ಮಂಗಳೂರಿನ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ ಇಂದು ಬಾಲ ಯೇಸುವಿನ ವಾರ್ಷಿಕ ಮಹೋತ್ಸವವನ್ನು ಆಚರಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಒಂದು ದಿನದ ಮಹೋತ್ಸವದಲ್ಲಿ ಬಾಲ ಯೇಸುವಿನ ನೆರವನ್ನು ಪಡೆಯಲು ಬಲಿಪೂಜೆಗಳು ನಡೆದವು.
ಒಂದೇ ಪ್ರೀತಿಯಿಂದ ಒಂದೇ ಆತ್ಮದಿಂದ ಒಂದೇ ಮನಸ್ಸಿನಿಂದ ಮೂಲಕ ನಾವು ಒಂದಾಗಿ ಒಂದೇ ಕುಟುಂಬದಂತೆ ಜೀವಿಸಲು ಪೂಜಾವಿಧಿಗಳ ಕರೆ ನೀಡಿದವು. ಸಂಜೆ 6 ಗಂಟೆಯ ಆಡಂಬರ ಬಲಿ ಪೂಜೆಯನ್ನು ಸ್ವಾಮಿ ಅರ್ಚಿಬಲ್ಡ್ ಗೋನ್ಸಾಲ್ವಿಸ್ ಮುಖ್ಯ ಯಾಜಕರಾಗಿ ನೆರವೇರಿಸಿದರು. ಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲಾ ಭಕ್ತಾದಿಗಳು ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡರು.