ಕಾಟಿಪಳ್ಳ: ಅಸ್ಸಿರಾತುಲ್ ಮುಸ್ತಖೀಮ್ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ

Update: 2022-01-15 17:53 GMT

ಮಂಗಳೂರು, ಜ.15: ಕಾಟಿಪಳ್ಳದ ಅಸ್ಸಿರಾತುಲ್ ಮುಸ್ತಖೀಮ್ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗಿವಹಿಸಿ ಮಾತನಾಡಿದ ವಿದ್ವಾಂಸ ಅಬ್ದುಲ್ ಖದೀರ್ ಉಮರಿ ಱಹೆಣ್ಣು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ಮತ್ತು ಧಾರ್ಮಿಕ ಚೌಕಟ್ಟಿನಲ್ಲಿ ಮಕ್ಕಳಿಗೆ ಇಸ್ಲಾಮಿನ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣ ನೀಡುತ್ತಿರುವ ಅಸ್ಸಿರಾತುಲ್ ಮುಸ್ತಖೀಮ್ ಶಿಕ್ಷಣ ಸಂಸ್ಥೆಯು ಚಿರಾಯುಗವಾಗಲಿ ಎಂದು ಹಾರೈಸಿದರು.

ಜಮೀಯತೇ ಅಹ್ಲೆ-ಹದೀಸ್ ಕರ್ನಾಟಕ ಗೋವ ಇದರ ಪ್ರದಾನ ಕಾರ್ಯದರ್ಶಿ ಮುಹಮ್ಮದ್ ಅಸ್ಲಮ್ ಖಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶೇಖ್ ಅಬ್ದುಲ್ ವಾರಿಸ್ ಮದನಿ-ಶಿರೂರು, ಶೇಖ್ ಶಕೀಬುರ್ರಹ್ಮಾನ್ ಸಲಫಿ ಶಿರೂರು, ಅಬ್ದುರ್ರಝಾಕ್ ಹಾಜಿ ಮಂಗಳೂರು, ಮುಹಮ್ಮದ್ ಮನ್ಸೂರ್ ಎಚ್‌ಎನ್‌ಜಿಸಿ ಸುರತ್ಕಲ್, ಕೋಸ್ಮೋಸ್ ಟ್ಯುಟೋರಿಯಲ್ ಮಂಗಳೂರು ಇದರ ಪ್ರಾಂಶುಪಾಲ ಮುಹಮ್ಮದ್ ನದೀಮ್, ಜಮೀಯತೆ ಅಹ್ಲೆ-ಹದೀಸ್‌ನ ಸಲಹಾ ಸಮಿತಿ ಸದಸ್ಯ ಕೆ.ಪಿ.ಮೊಯಿದಿನಬ್ಬ ಅತಿಥಿಗಳಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಸ್ಸಿರಾತುಲ್ ಮುಸ್ತಖೀಮ್ ಶರಿಯಾ ಕಾಲೇಜ್‌ನ ಹದಿಮೂರು ವಿದ್ಯಾರ್ಥಿನಿಯರಿಗೆ ಱಮುಸ್ತಖೀಮಿ’ ಮತ್ತು ಅಬ್ದುಲ್ಲಾ ಇಬ್ನ್ ಮಸೂದ್ ಕುರ್‌ಆನ್ ಹಿಫ್ಲ್ ಕಾಲೇಜ್‌ನಲ್ಲಿ ಕುರ್‌ಆನ್ ಕಂಠಪಾಠ ಮಾಡಿದ ಮೂವರು ವಿದ್ಯಾರ್ಥಿನಿಯರಿಗೆ 'ಕುರ್‌ಆನ್ ಹಾಫಿಝಾ’ ಪದವಿಯನ್ನು ಪ್ರದಾನ ಮಾಡಲಾಯಿತು.

ಅಶ್ರಫ್ ಸಲಫಿ ಸ್ವಾಗತಿಸಿದರು. ಹಾಫಿಝ್ ಮುಹಮ್ಮದ್ ಯಾಸೀನ್ ವರದಿ ವಾಚಿಸಿದರು. ಅಬ್ದುಲ್ ಸ್ಸಲಾಮ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News