ಕೋಟೇಶ್ವರ ಬ್ಯಾರೀಸ್ ವಸತಿ ಸಮುಚ್ಛಯದಲ್ಲಿ ಗಣರಾಜ್ಯೋತ್ಸ

Update: 2022-01-26 10:56 GMT

ಕುಂದಾಪುರ, ಜ.26: ಕೋಟೇಶ್ವರದ ಬ್ಯಾರೀಸ್ ಗ್ರೀನ್ ಅವೆನ್ಯೂ ವಸತಿ ಸಮುಚ್ಛಯದಲ್ಲಿ 73ನೆ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಧ್ವಜಾರೋಹಣವನ್ನು ಸಾಮಾಜಿಕ ಕಾರ್ಯಕರ್ತ, ಉದ್ಯಮಿ ಅಬು ಮೊಹಮ್ಮದ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಂ.ಅಬ್ದುಲ್ ರೆಹಮಾನ್ ಬ್ಯಾರಿ ವಹಿಸಿದ್ದರು.

ಕೋಟೇಶ್ವರ ಮಸೀದಿಯ ಧರ್ಮಗುರು ಫಜಿಲತ್ ಹುಸೇನ್, ಹಿರಿಯರಾದ ರಂಗನಾಥ್ ಭಟ್, ಸುಕುಮಾರ್ ಬಂಗೇರ, ಸಾರಾ ಕ್ಲಿನಿಕ್‌ನ ಡಾ.ಆಸೀಫ್, ಪದ್ಮನಾಭ ಹೆಬ್ಬಾರ್ ಉಪಸ್ಥಿತರಿದ್ದರು. ಬ್ಯಾರೀಸ್ ಕನ್ನಡ ಮಾಧ್ಯಮ ಪ್ರೌಢ ಶಾಲೆಯ ಸಹಶಿಕ್ಷಕ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News