ಗಣರಾಜ್ಯೋತ್ಸವದಲ್ಲಿ ದ.ಕ. ಜಿಲ್ಲಾ ಮಟ್ಟದ ಎಸ್ಕೆಎಸ್‌ಬಿವಿ ಸ್ಕೌಟ್ ಪ್ರದರ್ಶನ

Update: 2022-01-26 17:21 GMT

ಮಂಗಳೂರು, ಜ.26: ದ.ಕ.ಜಿಲ್ಲಾ ಎಸ್ಕೆಎಸೆಸ್ಸೆಫ್ ಗಣರಾಜ್ಯೋತ್ಸವದ ಪ್ರಯುಕ್ತ ಬುಧವಾರ ದೇರಳಕಟ್ಟೆಯಲ್ಲಿ ನಡೆದ ಮಾನವ ಸರಪಳಿ ಸಮಾವೇಶದಲ್ಲಿ ಜಿಲ್ಲಾಮಟ್ಟದ ಬಾಲ ಇಂಡಿಯಾ ಕಾರ್ಯಕ್ರಮ ಮತ್ತು ಸ್ಕೌಟ್ ಪ್ರದರ್ಶನಗೊಂಡಿತು.

ಜಿಲ್ಲೆಯ 23 ರೇಂಜ್ ವ್ಯಾಪ್ತಿಯ ಮದ್ರಸಗಳಿಂದ ಹಲವಾರು ತಂಡಗಳು ಭಾಗವಹಿಸಿತ್ತು. ಆ ಪೈಕಿ ಪುತ್ತೂರು ಪಡೀಲು ಮುಹೀನುಲ್ ಇಸ್ಲಾಂ ಮದ್ರಸ ತಂಡವು ಅತ್ಯುತ್ತಮ ಪ್ರದರ್ಶನವನ್ನು ನೀಡಿ ಜಿಲ್ಲಾ ಮಟ್ಟದ ಪ್ರಥಮ ಸ್ಥಾನಕ್ಕೆ ಪಾತ್ರವಾಯಿತು.

ಅಭಿನಂದನೆ: ವಿಜೇತ ತಂಡಕ್ಕೆ ಪಡೀಲ್ ಮದ್ರಸದ ಸದರ್ ಮುಅಲ್ಲಿಂ ಹನೀಫ್ ದಾರಿಮಿ ನೆಕ್ಕಿಲಾಡಿ, ಮಸ್ಜಿದ್ ಕಮಿಟಿಯ ಅಧ್ಯಕ್ಷ ಆರ್.ಪಿ. ಅಬ್ದುಲ್ ರಝಾಕ್, ಎಸ್ಕೆಎಸೆಸ್ಸೆಫ್ ಕಲ್ಲೇಗ ಕ್ಲಸ್ಟರ್ ಅಧ್ಯಕ್ಷ ಸೈಯದ್ ಆಫ್ಹಾಂ ತಂಙಳ್, ಮುಫತ್ತಿಶ್ ಉಮರ್ ಅಭಿನಂದಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News