ದ.ಕ.ಜಿಲ್ಲೆ: ಉಕ್ರೇನ್‌ನಿಂದ ಮತ್ತೆ 9 ವೈದ್ಯಕೀಯ ವಿದ್ಯಾರ್ಥಿಗಳು ಪಾರು

Update: 2022-03-06 17:16 GMT

ಮಂಗಳೂರು, ಮಾ.6: ಯುದ್ಧಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ದ.ಕ.ಜಿಲ್ಲೆಯ 18 ಮಂದಿ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ರವಿವಾರ 9 ವಿದ್ಯಾರ್ಥಿಗಳು ಪಾರಾಗಿದ್ದಾರೆ. ಈಗಾಗಲೆ 7 ಮಂದಿ ಪಾರಾಗಿ ಬಂದಿದ್ದು, ಇನ್ನು ಕೇವಲ ಇಬ್ಬರು ವಿದ್ಯಾರ್ಥಿಗಳು ಮಾತ್ರ ಪಾರಾಗಿ ಬರಲು ಬಾಕಿಯಾಗಿದ್ದು, ಅವರನ್ನು ಕರೆತರಲು ಪ್ರಯತ್ನ ಮುಂದುವರಿದಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

ಭಾರತ ಸರಕಾರದ ‘ಆಪರೇಷನ್ ಗಂಗಾ’ ಕಾರ್ಯಾಚರಣೆಯಲ್ಲಿ ಡೇಲ್ ಅಂದ್ರಾದೆ ಲುವಿಸ್ ರವಿವಾರ ಮುಂಬೈ ತಲುಪಿದ್ದು, ಮಂಗಳೂರಿಗೆ ಹೊರಟು ಬಂದಿದ್ದಾರೆ. ಮಂಗಳೂರು ತಾಲೂಕಿನ ಲಾಯ್ಡಾ ಆ್ಯಂಟನಿ ಪಿರೇರಾ ಹೊಸದಿಲ್ಲಿ ತಲುಪಿದ್ದಾರೆ.

ಅನೈನಾ ಅನ್ನಾ, ಅಹ್ಮದ್ ಸಾದ್ ಅರ್ಷದ್, ಕ್ಲೇಟನ್ ಓಸ್ಮಂಡ್ ಡಿಸೋಜ ಸೋಮವಾರ ಬೆಳಗ್ಗೆ 10:50ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ.

ಮಂಗಳೂರು ತಾಲೂಕಿನ ಮುಹಮ್ಮದ್ ಮಿಸಾಲ್ ಅರೀಫ್ ಮತ್ತು ಪೃಥ್ವಿರಾಜ್ ಭಟ್ ಹಾಗೂ ಸಾಕ್ಷಿ ಸುಧಾಕರ್ ಕೂಡ ಹೊಸದಿಲ್ಲಿ ತಲುಪಿದ್ದಾರೆ.

ಬೆಳ್ತಂಗಡಿ ತಾಲೂಕಿನ ಹೀನಾ ಫಾತಿಮಾ ಮತ್ತು ಮಂಗಳೂರು ತಾಲೂಕಿನ ಜೆ. ಅನುಷಾ ಭಟ್, ರವಿವಾರ ಮನೆಗೆ ತಲುಪಿದ್ದರೆ, ಅಂಶಿತಾ ರೆಶಾಲ್ ಪದ್ಮಶಾಲಿ ಮುಂಬೈ ತಲುಪಿದ್ದಾರೆ. ಲಕ್ಷಿತಾ ಪುರುಷೋತ್ತಮ್ ಬೆಂಗಳೂರು ತಲುಪಿದ್ದು, ಖಾಸಗಿ ವಾಹನದಲ್ಲಿ ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಪೂಜಾ ಮಲ್ಲಪ್ಪ ಅತಿವಾಳ್ ಬೆಂಗಳೂರು ತಲುಪಿದ್ದಾರೆ.

ಮೂಡುಬಿದಿರೆ ತಾಲೂಕಿನ ಪ್ರಣವ್ ಕುಮಾರ್ ಎಸ್.ಮನೆ ತಲುಪಿದ್ದರೆ, ಪ್ರೀತಿ ಪೂಜಾರಿ ಬೆಂಗಳೂರು ತಲುಪಿದ್ದಾರೆ. ಶಲ್ವಿನ್ ಪ್ರೀತಿ ಅರಾನ್ಹಾ ಹೊಸದಿಲ್ಲಿ ತಲುಪಿದ್ದಾರೆ.

ಇನ್ನು ಮಂಗಳೂರು ತಾಲೂಕಿನ ಶೇಖ್ ಮುಹಮ್ಮದ್ ತ್ವಾಹಾ ಪೋಲೆಂಡ್ ಮೂಲಕ ಮತ್ತು ಮೂಡಬಿದಿರೆ ತಾಲೂಕಿನ ನೈಮಿಶಾ ರೊಮಾನಿಯಾ ಗಡಿ ಮೂಲಕ ತವರು ತಲುಪಲಿದ್ದಾರೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News