ಸಾಹಿತ್ಯದ ಉದ್ದೇಶ ಗುಲಾಮರನ್ನು ಸೃಷ್ಟಿಸುವುದಲ್ಲ : ಬಿ.ವಿ ವಸಂತಕುಮಾರ್
ಕಾರ್ಕಳ : ಸಾಹಿತ್ಯದ ಉದ್ದೇಶ ಗುಲಾಮರನ್ನು ಸೃಷ್ಟಿಸುವುದಲ್ಲ, ಸ್ವಾಭಿಮಾನಿಗಳನ್ನು ಸೃಷ್ಟಿಸುವುದು ಎಂದು ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಬಿ.ವಿ ವಸಂತಕುಮಾರ್ ಅವರು ಹೇಳಿದರು.
ಭುವನೇಂದ್ರ ಕಾಲೇಜಿನಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಹಾಗೂ ಭುವನೇಂದ್ರ ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ ’ಕನ್ನಡ ಸಾಹಿತ್ಯದಲ್ಲಿ ಸಮನ್ವಯ ಚಿಂತನೆಯ ಒಳ ನೋಟಗಳು’ ಎಂಬ ಎರಡು ದಿನಗಳ ಅವರು ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಾಠದಲ್ಲಿ ಓದಿದ ಸಾಹಿತ್ಯದ ಸತ್ಯ ಸುಳ್ಳುಗಳನ್ನು ಪರಿಷ್ಕರಿಸಿ ಸತ್ಯವಾದುದನ್ನು ಅರ್ಥಮಾಡಿಕೊಂಡಾಗ ಮಾತ್ರ ಕನ್ನಡ ನಾಡು ನುಡಿ ಬೆಳೆಯಲು ಸಹಾಯವಾಗುತ್ತದೆ. ಸ್ವತಂತ್ರ ಚಿಂತಕರು ಮಾತ್ರ ರಾಷ್ಟ್ರದ ಭವಿಷ್ಯವನ್ನು ನಿರ್ಮಾಣ ಮಾಡುವ ಮೂಲಕ ಲೋಕ ಕಲ್ಯಾಣ ಬಯಸುವಂತದು. ಇದನ್ನು ನಮ್ಮ ದೇಶ ಎಂದೋ ತಿಳಿಸಿಕೊಟ್ಟಿದೆ. ಆದರೆ ಇಂದು ನಮ್ಮ ರಾಷ್ಟ್ರವನ್ನೇ ಕೀಳಾಗಿ ನೋಡುವ ಪ್ರವೃತ್ತಿ ಜಾಸ್ತಿಯಾಗಿದೆ. ಇವತ್ತು ವಿಚಾರಗಳನ್ನು ಬೇರೆಡೆಗಳಿಂದ ತಂದು ಜಡವಾದ , ಸಂಘರ್ಷವಾದ ತುಂಬಲಾಗುತ್ತಿದೆ ಯಾವ ಜನಾಂಗ ತನ್ನ ಕರಿತು ಕೀಳರಿಮೆಯನ್ನು ತೋರುತ್ತದೆಯೋ ಆ ಜನಾಂಗಕ್ಕೆ ಬಿಡುಗಡೆಯಿಲ್ಲ. ರಾಷ್ಟ್ರಕವಿ ಕುವೆಂಪು ಅವರು ಮನುಜ ಮತ, ವಿಶ್ವಪಥ, ಸಮನ್ವಯ, ಸರ್ವೋದಯ, ಪೂರ್ಣದೃಷ್ಟಿ ಎಂಬ ೫ ತತ್ವಗಳನ್ನು ತಿಳಿಸಿದ್ದು, ಅವರಿಂದ ಆಧುನಿಕ ಸಹಿತ್ಯ ಮೈಕೊಡವಿ ನಿಂತಿದೆ. ಕನ್ನಡ ಸಾಹಿತ್ಯ ಸಂಸ್ಕೃತಿ ಏಕತೆಯನ್ನು ಹೇಳಿದೆ, ವಿಘಟನೆಯನ್ನಲ್ಲ ಎಂದರು.
ಸಂಕಿರಣವನ್ನು ಉದ್ಘಾಟಿಸಿದ ಇಂಧನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ. ಸುನಿಲ್ ಕುಮಾರ್ ಮಾತನಾಡಿ ಇಂದಿನ ಹೊಸ ಪೀಳಿಗೆಯವರಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಬೇಕು ಎಂಬ ಹಂಬಲವನ್ನು ಇಟ್ಟುಕೊಂಡು ಕಾರ್ಕಳ ಉತ್ಸವದ ಅಂಗವಾಗಿ ಸಾಹಿತ್ಯ ವಿಚಾರ ಸಂಕಿರಣವನ್ನು ಆಯೋಜಿಸಿಕೊಳ್ಳಲಾಗಿದೆ ಕಾರ್ಕಳದ ನೆಲದಲ್ಲಿ ಕನ್ನಡ, ತುಳು ಸಾಹಿತ್ಯದ ಕಸುವಿದೆ. ಕಾರ್ಕಳದ ಶ್ರೇಷ್ಠ ಸಾಹಿತಿಗಳನ್ನು ಉಲ್ಲೇಖಿಸಿದ ಅವರು ಶ್ರೇಷ್ಠ ಸಾಹಿತಿಗಳಿಂದ ಕಾರ್ಕಳ ಶ್ರೀಮಂತವಾಗಿದೆ ಈ ನೆಲದ ಮುದ್ದಣ -ಮನೋರಮೆಯರ ಸಲ್ಲಾಪ ಸಮನ್ವಯದ ದ್ಯೋತಕ. ಹತ್ತಾರು ಗಣ್ಯರು ಇಂತಹ ಸಾಹಿತ್ಯ ವಿಚಾರ ಸಂಕಿರಣದಲ್ಲಿ ಭಾಗವಹಿಸುವ ಮೂಲಕ ಯುವಕರಲ್ಲಿ ಹೊಸ ಇಚ್ಛಾಶಕ್ತಿ ಹೊರಹೊಮ್ಮುವಂತಾಗಬೇಕು ಎಂದರು.
ಮುಖ್ಯ ಅತಿಥಿ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಅವರು ಮಾತನಾಡಿ ಮನುಷ್ಯ ಮನುಷ್ಯರ ನಡುವೆ ಸೌಹಾರ್ದಯತವಾದ ಮಾತೃತ್ವದ ಭಾವನೆಯ ಬಾಂಧವ್ಯ ವೃದ್ಧಿಸುವುದೇ ಸಾಹಿತ್ಯ. ಶುದ್ಧ ಸಾಹಿತ್ಯದ ಉದ್ದೇಶವೇ ಸಮನ್ವಯ ಸಾಧಿಸುವುದು. ಸೃಜನಶೀಲ ಸಾಹಿತ್ಯಕ್ಕೆ ಮಾನವೀಯ ಮೌಲ್ಯಗಳನ್ನು ಪಸರಿಸುವ ಶಕ್ತಿಯಿದೆ. ಸಮನ್ವಯತೆ ಸಾರುವ ಇಂತಹ ಸಾಹಿತ್ಯದ ಉದ್ದೇಶವೇ ಸಮನ್ವಯ ಸಾಧಿಸುವುದು. ಸೃಜನಶೀಲ ಸಾಹಿತ್ಯಕ್ಕೆ ಮಾನವೀಯ ಮೌಲ್ಯಗಳನ್ನು ಪಸರಿಸುವ ಶಕ್ತಿಯಿದೆ. ಸಮನ್ವಯತೆ ಸಾರುವ ಇಂತಹ ಸಾರ್ಥಕ ವಿಚಾರಗೋಷ್ಠಿ ನಾಡಿನ ಎಲ್ಲೆಡೆ ನಡೆದಾಗ ಕನ್ನಡ, ಸಾಹಿತ್ಯದ ಸತ್ವ, ಶಕ್ತಿ ಹೆಚ್ಚುತ್ತದೆ ಎಂದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಸಿ.ಎ. ಶಿವಾನಂದ ಪೈ ಮಾತನಾಡಿದರು. ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್ ಸ್ವಾಗತಿಸಿದರು. ರಾಜ್ಯ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ ಎನ್. ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥ ಡಾ.ಅರುಣ್ ಕುಮಾರ್ ಎಸ್.ಆರ್. ಇದ್ದರು. ಸಾಹಿತ್ಯ ಅಕಾಡೆಮಿ ಸಂಚಾಲಕ ಡಾ. ಶರಬೇಂದ್ರ ಸ್ವಾಮಿ ವಂದಿಸಿದರು. ಕನ್ನಡ ಉಪನ್ಯಾಸಕಿ ವನಿತಾ ಶೆಟ್ಟಿ ನಿರೂಪಿಸಿದರು.