ಗುರುಪುರ: ‘ಪಂಚಾಯತ್ ರಾಜ್’ ದಿನದ ಪ್ರಯುಕ್ತ ಸನ್ಮಾನ

Update: 2022-04-24 12:57 GMT

ಗುರುಪುರ : ‘ಪಂಚಾಯತ್ ರಾಜ್’ ದಿನದ ಪ್ರಯುಕ್ತ ಗುರುಪುರ ಗ್ರಾಪಂನಲ್ಲಿ ಗ್ರಾಪಂ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿಯ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಐವರು ಸಾಧಕರನ್ನು ಸನ್ಮಾನಿಸಲಾಯಿತು.

ಅಡ್ಡೂರು-ಪೊಳಲಿ ಭಾಗದಲ್ಲಿ ಸೇತುವೆ ಇಲ್ಲದ ಕಾಲದಲ್ಲಿ ಪರಿಸರವಾಸಿಗಳಿಗೆ ಫಲ್ಗುಣಿ ನದಿಯಲ್ಲಿ ದೋಣಿ ಸೇವೆ ನೀಡಿದ್ದ ವಯೋವೃದ್ಧ ಅಬ್ದುಲ್ ಕರೀಂ, ಕೋವಿಡ್ ಸಂದರ್ಭ ಅಡ್ಡೂರು ಮತ್ತು ಗುರುಪುರ ಗ್ರಾಮದ ನಿವಾಸಿಗಳಿಗೆ ಆಶಾಕಿರಣವಾಗಿದ್ದ ಅಡ್ಡೂರಿನ ಡಾ. ಸಿದ್ಧಿಕಿ ಮತ್ತು ಗುರುಪುರದ ಡಾ. ಶ್ವೇತಾ ಪ್ರಭು, ಗುರುಪುರದ ಕಂಬಳ ಕೋಣಗಳ ಯಜಮಾನ ಜಗದೀಶ್ ಶೆಟ್ಟಿ ಕಾರಮೊಗರುಗುತ್ತು ಹಾಗೂ ಗುರುಪುರದ ಮ್ಯಾರಥಾನ್ ಓಟಗಾರ ರಕ್ಷಿತ್ ಜೆ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷ ಯಶವಂತ ಶೆಟ್ಟಿ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ ಗ್ರಾಮದ ಹಿರಿಯ ಸಾಧಕರನ್ನು ಗುರುತಿಸಲಾಗಿದೆ. ಇವರ ಸೇವೆ ಅನನ್ಯವಾಗಿತ್ತು. ಗ್ರಾಮವಾಸಿಗಳ ಕಷ್ಟಕ್ಕೆ ಹತ್ತಿರದಿಂದ ಸ್ಪಂದಿಸಿದ ಇವರು ನೈಜ ಸಮಾಜ ಸೇವಕರು ಎಂದರು.

ಗ್ರಾಪಂ ಪಿಡಿಒ ಅಬೂಬಕ್ಕರ್, ಕಾರ್ಯದರ್ಶಿ ಅಶೋಕ್, ಸದಸ್ಯರಾದ ರಾಜೇಶ್ ಸುವರ್ಣ, ನಳಿನಿ ಶೆಟ್ಟಿ, ಸಂಪಾ, ಬಾಲಕೃಷ್ಣ ಪೂಜಾರಿ, ಮನ್ಸೂರ್, ಅಶ್ರಫ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News