ಈದುಲ್ ಫಿತ್ರ್; ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ ಕಮಿಷನರ್‌ ಶಶಿಕುಮಾರ್

Update: 2022-05-03 10:44 GMT

ಉಳ್ಳಾಲ: ಈದುಲ್ ಫಿತ್ರ್ ಪ್ರಯುಕ್ತ  ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಈದ್ ನಮಾಝ್ ಮತ್ತು ಖುತುಬಾ ಪಾರಾಯಣ ನಡೆಯಿತು.

ಅನ್ವರ್ ಅಲಿ ದಾರಿಮಿ ಈದ್ ನಮಾಝ್ ಮತ್ತು ಖುತುಬಾ ಪಾರಾಯಣದ ನೇತೃತ್ವ ವಹಿಸಿದ್ದರು.  ಬಳಿಕ  ದರ್ಗಾ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ಅವರು ಸಂದೇಶ ನೀಡಿದರು.

ಈ ವೇಳೆ ದರ್ಗಾಕ್ಕೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಝಿಯಾರತ್ ನಡೆಸಿದ ಬಳಿಕ ಮಾತನಾಡಿ, ಈದುಲ್ ಫಿತ್ರ್ ಮುಸ್ಲಿಮರ ಪಾಲಿಗೆ ಬಹಳ ಸಂತೋಷ ಸಡಗರ, ಸಂಭ್ರಮದ ಹಬ್ಬ. ಈ ವೇಳೆ ಭದ್ರತೆ ಒದಗಿಸುವ ಕರ್ತವ್ಯ ನಮ್ಮದು. ಈ ಹಬ್ಬ ಸಮುದಾಯಕ್ಕೆ ಸುಖ ಸಂತೋಷವನ್ನು ತರಲಿ ಎಂದು ಶುಭ ಹಾರೈಸಿದ ಅವರು ಹಿರಿಯರನ್ನು, ಮಕ್ಕಳನ್ನು ಆಲಿಂಗಿಸುವ ಮೂಲಕ ಸಂತೋಷವನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಉಳ್ಳಾಲ ಇನ್ಸ್‌ ಪೆಕ್ಟರ್ ಸಂದೀಪ್, ಫಾರೂಕ್ ಉಳ್ಳಾಲ್, ಯು.ಟಿ.ಝುಲ್ಫಿಕರ್ ಅಲಿ, ಆಸಿಫ್ ಅಬ್ದುಲ್ಲಾ, ಅಬೂಬಕ್ಕರ್ ಮುಕ್ಕಚೇರಿ, ಕಬೀರ್ ಚಾಯಬ್ಬ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News