×
Ad

ಮಂಗಳೂರು: ಇಬ್ಬರು ಸಂಶಯಾಸ್ಪದ ವ್ಯಕ್ತಿಗಳ ಸೆರೆ

Update: 2022-05-06 21:07 IST

ಮಂಗಳೂರು : ನಗರದ ಪಡೀಲ್ ಬಜಾಲ್ ಕ್ರಾಸ್ ಬಳಿಯ ಅಯ್ಯಂಗಾರ್ ಬೇಕರಿಯ ಕಟ್ಟಡದ ಹಿಂದೆ ಹೊಂಚು ಹಾಕಿಕೊಂಡಿದ್ದ ಇಬ್ಬರು ಯುವಕರನ್ನು ಸಂಶಯದ ಮೇಲೆ ಕಂಕನಾಡಿ ನಗರ ಠಾಣೆಯ ಪೊಲೀಸರು ಶುಕ್ರವಾರ ಮುಂಜಾವ ಬಂಧಿಸಿದ್ದಾರೆ.

ಎಎಸ್ಸೈ ಜಗದೀಶ್ ಶುಕ್ರವಾರ ಮುಂಜಾವ ಸುಮಾರು ೪:೩೦ಕ್ಕೆ ಗಸ್ತು ನಿರತರಾಗಿದ್ದ ವೇಳೆ ಇಬ್ಬರು ಸಂಶಯಾಸ್ಪದ ರೀತಿಯಲ್ಲಿರುವುದು ಕಂಡು ಬಂತು. ತಕ್ಷಣ ಹಿಡಿದು ವಿಚಾರಿಸಿದಾಗ ಸಮರ್ಪಕ ಉತ್ತರ ನೀಡಲಿಲ್ಲ.

ಮೂಡುಬಿದಿರೆಯ ಹೊಸಬೆಟ್ಟು ಗ್ರಾಮದ ಮೊಗರುಗುಡ್ಡೆಯ ಪ್ರಸಾದ್ ಪೂಜಾರಿ (೨೫) ಮತ್ತು ಬೆಂಗಳೂರು ಜೆಪಿ ನಗರದ  ಮಹೇಂದ್ರ (೨೬) ಎಂದು ಈ ಯುವಕರು ಪೊಲೀಸರಿಗೆ ಗುರುತು ಪರಿಚಯ ನೀಡಿದ್ದು, ಬಳಿಕ ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News