ಗುರುಪುರ: ಹಡೀಲು ಜಮೀನಿಗೆ ಬೆಂಕಿ

Update: 2022-05-08 15:10 GMT

ಮಂಗಳೂರು, ಮೇ 8: ಗುರುಪುರದ ದೋಣಿಂಜೆ ಪ್ರದೇಶದ ಹಡೀಲು ಜಮೀನಿನಲ್ಲಿ ರವಿವಾರ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಒಣಹುಲ್ಲಿನ ಸಹಿತ ಹಲವು ತಾಳೆ, ಈಚಲು, ಮಾವು ಹಾಗೂ ಹಲಸಿನ ಮರಗಳು ಸುಟ್ಟು ಕರಕಲಾಗಿವೆ.

ಮಧ್ಯಾಹ್ನ ಕಾಣಿಸಿಕೊಂಡ ಈ ಬೆಂಕಿಯು ಸಂಜೆಯಾಗುತ್ತಲೇ ಕುಕ್ಕುದಕಟ್ಟೆ ಭಾಗದತ್ತ ವ್ಯಾಪಿಸಿದೆ, ಈ ಪ್ರದೇಶದಲ್ಲಿ ಗೇಲ್ ಕಂಪೆನಿಯವರು ಅಳವಡಿಸಿದ್ದ ಗ್ಯಾಸ್ ಪೈಪ್‌ಲೈನ್ ಸಂಪರ್ಕದ ಸೆನ್ಸಾರ್‌ಗೆ ಹಾನಿಯುಂಟಾಗಿದೆ. ಮಾಹಿತಿ ತಿಳಿದ ಕಂಪೆನಿಯವರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಅಗ್ನಿಶಾಮಕ ದಳದವರು ಕಂಪೆನಿಯ ಉಪಕರಣಗಳಿಗೆ ಹಾನಿಯಾಗದಂತೆ ಒಂದು ಕಡೆಯಿಂದ ಬೆಂಕಿ ನಂದಿಸಿದರೂ, ಮತ್ತೊಂದು ಕಡೆಯಲ್ಲಿ ವ್ಯಾಪಕವಾಗಿ ಹರಡಿಕೊಂಡಿತ್ತು. ಬೆಂಕಿ ಆಕಸ್ಮಿಕಕ್ಕೆ ಕಾರಣ ತಿಳಿದು ಬಂದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News