ಮೇ 20: ದ.ಕ. ಜಿಲ್ಲೆಯಾದ್ಯಂತ "ರಾಜ್ ಸೌಂಡ್ಸ್ ಆ್ಯಂಡ್ ಲೈಟ್ಸ್" ತೆರೆಗೆ

Update: 2022-05-17 17:00 GMT

ಮಂಗಳೂರು : ವೈಭವ ಫ್ಲಿಕ್ಸ್ ಅಡಿಯಲ್ಲಿ ಮ್ಯಾಂಗೋ ಪಿಕ್ಕಲ್  ಬ್ಯಾನರ್ ಸಹಯೋಗ ದಲ್ಲಿ ತಯಾರಾದ ರಾಜ್  ಸೌಂಡ್ ಆ್ಯಂಡ್ ಲೈಟ್ಸ್ ತುಳು ಸಿನಿಮಾ 11 ಹೊರ ದೇಶಗಳಲ್ಲಿ ಮತ್ತು ದೇಶದ 6 ಕಡೆಗಳಲ್ಲಿ ಮೇ 13, 14,15 ರಂದು ಪ್ರೀಮಿಯರ್ ಯಶಸ್ವಿಯಾಗಿ ಪ್ರದರ್ಶನ ಕಂಡಿತು.

ರಾಜ್  ಸೌಂಡ್ಸ್ ಆಂಡ್ ಲೈಟ್ಸ್ ಪ್ರೀಮಿರ್‌ ಶೋ ಇದರ ಅಧಿಕೃತ ಉದ್ಘಾಟನೆ ಎಪ್ರಿಲ್ 24ರಂದು ದುಬೈಯಲ್ಲಿರುವ ಮಾರ್ಕೊಪೊಲೋ  ಹೊಟೇಲ್ ನಲ್ಲಿರುವ ಸಭಾಗಂಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು. ಕಳೆದ ಮೂರು ದಿನಗಳಲ್ಲಿ ವಿದೇಶದಲ್ಲಿರುವ ಸುಮಾರು ಐದು ಸಾವಿರ ತುಳುವರು ಸಿನಿಮಾ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ನಿರ್ಮಾಪಕ ಆನಂದ ಎನ್ ಕುಂಪಲ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಿನಿಮಾ ನೋಡಿದವರು ತಮ್ಮ ಅಭಿಪ್ರಾಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ರಾಜ್ ಸೌಂಡ್ ಆ್ಯಂಡ್ ಲೈಟ್ ತುಳುವಿನಲ್ಲಿ ದೊಡ್ಡ ಬಜೆಟ್ ನ  ಈ ಸಿನಿಮಾಕ್ಕಾಗಿ ಒಂದೂವರ ಕೋಟಿ ರೂಪಾಯಿಗೂ ಮಿಕ್ಕಿ ಖರ್ಚಾಗಿದೆ. 'ಒಂದು ಮೊಟ್ಟೆಯ ಕಥೆ' ಚಿತ್ರ ತಂಡದ ನೇತೃತ್ವದಲ್ಲಿ ವೈಭವ್ ಫ್ಲಿಕ್ಸ್  ಅಡಿಯಲ್ಲಿ, ಮ್ಯಾಂಗೋ ಪಿಕಲ್ ಬ್ಯಾನರ್  ಸಹ ಭಾಗಿತ್ವದಲ್ಲಿ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ತುಳು ಚಿತ್ರ ನಿರ್ಮಾಣವನ್ನು ಮೇ 20 ರಂದು ಕರಾವಳಿಯ ಲ್ಲಿ ತೆರೆ ಕಾಣಲಿದೆ.

ಕರಾವಳಿಯಲ್ಲಿ ಮಾತ್ರವಲ್ಲದ ವಿದೇಶದಲ್ಲೂ ತುಳು ಪ್ರಶಂಸೆಗೆ ಪಾತ್ರವಾಗಿದೆ. ಈ ಚಿತ್ರ ಮದುವೆ ಮತ್ತು ಮದರಂಗಿ ಕಾರ್ಯಕ್ರಮದ ಕಥಾ ಹಂದರವನ್ನು ಹೊಂದಿದ್ದು, ನೈಜತೆಗೆ ಒತ್ತುಕೊಟ್ಟು ಸುಂದರವಾಗಿ ಸೆರೆ ಹಿಡಿಯಲಾಗಿದೆ. ಕೌಟುಂಬಿಕ ಮನೋರಂಜನೆಯ ಜತೆಗೆ ಹಾಸ್ಯಕ್ಕೂ ಪ್ರಾಮುಖ್ಯತೆ ನೀಡಲಾಗಿದೆ. ಈ ಚಿತ್ರವನ್ನು ಯುವ ನಟ ರಾಹುಲ್ ಅಮಿನ್ ನಿರ್ದೇಶಿಸಿದ್ದು, ಆನಂದ್ ಎನ್ ಕುಂಪಲ, ನಿರ್ಮಾಪಕರಾಗಿದ್ದಾರೆ. ಈ ಸಿನೆಮಾದ ಕಥೆಯನ್ನು ವಿನೀಶ್ ಕುಮಾರ್ ಹಾಗೂ ಸಂಭಾಷಣೆಯನ್ನು ಗಿರಿಗಿಟ್ ಚಿತ್ರ ಖ್ಯಾತಿಯ ಪ್ರಸನ್ನ ಶೆಟ್ಟಿ ಪೈಲೂರು ಬರೆದಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ಪಡ್ಡಾಯಿ ಚಿತ್ರ ಖ್ಯಾತಿಯ ಕ್ಯಾಮರಾಮೆನ್ ವಿಷ್ಣುಪ್ರಸಾದ್ ಅವರು ಚಿತ್ರೀಕರಿಸಿದ್ದಾರೆ. ಸಂಗೀತ ನಿರ್ದೇಶಕರಾಗಿ ಸೃಜನ್ ಕುಮಾರ್ ತೋನ್ಸೆ, ನವೀನ್ ಶೆಟ್ಟಿ ನೃತ್ಯ ಸಂಯೋಜನೆ ಮಾಡಿದ್ದಾರೆ. ಚಿತ್ರಕಥೆಯನ್ನು ವಿನೀತ್‌ ಕುಮಾರ್‌ ಹಾಗೂ ರಾಹುಲ್ ಅಮೀನ್ ಬರೆದಿದ್ದಾರೆ.

ನಾಯಕರಾಗಿ ವಿನೀತ್  ಕುಮಾರ್‌, ನಾಯಕಿಯಾಗಿ (ಹೊಸ ಪರಿಚಯ) .ಯಶ ಶಿವಕುಮಾರ್ ಹಾಗೂ ನಾಯಕಿ, ಕರಿಷ್ಮಾ ಆಮೀನ್ ಅಭಿನಯಿಸಿದ್ದಾರೆ. ತಾರಾಗಣದಲ್ಲಿ ಹಾಸ್ಯ ದಿಗ್ಗಜರಾದ ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು ಹಾಗೂ ಸತೀಶ್ ಬಂದರೆ, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ, ಮರ್ವಿನ್ ಉಮೇಶ್ ಮಿಜಾರ್, ರವಿ ರಾಮಕುಂಜ, ಚೈತ್ರ ಶೆಟ್ಟಿ (ಒಂದು) ಹಾಗೂ ಇನ್ನಿತರ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಬಿ ಆಶೋಕ್ ಕುಮಾರ್, ಸುಹಾನ್ ಪ್ರಸಾದ್‌, ಪವನ್ ಕುಮಾರ್, ನಿತಿನ್ ರಾಜ್ ಶೆಟ್ಟಿ, ಅರ್ಪಿತ್ ಅಡ್ಯಾರ್, ಅಜಯ್ ಬಾಳಿಗೆ, ಸೀತಾರಾಮ ಶೆಟ್ಟಿ ಇವರು ನಿರ್ಮಾಪಕರಾಗಿದ್ದಾರೆ ಎಂದು ನಿರ್ದೇಶಕ ರಾಹುಲ್ ಅಮೀನ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಚಿತ್ರತಂಡದ  ಕಲಾವಿದರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News