ಮಂಗಳೂರು: ಶಿಕ್ಷಕರ ನೇಮಕಾತಿ ಪರೀಕ್ಷೆಗೆ 1957 ಅಭ್ಯರ್ಥಿಗಳು ಗೈರು

Update: 2022-05-21 17:12 GMT
ಸಾಂದರ್ಭಿಕ ಚಿತ್ರ

ಮಂಗಳೂರು : ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ದ.ಕ. ಜಿಲ್ಲೆಯ 22 ಕೇಂದ್ರದಲ್ಲಿ ಶನಿವಾರ ನಡೆದ  ಸಾಮಾನ್ಯ ಜ್ಞಾನ ಹಾಗೂ ಆಂಗ್ಲ ಭಾಷಾ ಶಿಕ್ಷಕರ ಪೈಕಿ 1957 ಮಂದಿ ಗೈರಾಗಿದ್ದಾರೆ.

ಸಾಮಾನ್ಯ ಜ್ಞಾನ ಪರೀಕ್ಷೆಗೆ ೪,೮೫೯ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಆ ಪೈಕಿ ೩,೧೭೩ ಮಂದಿ ಹಾಜರಾಗಿದ್ದರೆ, ೧,೬೮೬ ಮಂದಿ ಗೈರಾಗಿದ್ದರು. ಆಂಗ್ಲಭಾಷಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ೬೩೨ ಅಭ್ಯರ್ಥಿಗಳು ಹೆಸರು ನೋಂದಾಯಿಸಿದ್ದರು. ಆ ಪೈಕಿ ೩೬೧ ಅಭ್ಯರ್ಥಿಗಳು ಹಾಜರಾಗಿದ್ದರೆ, ೨೭೧ ಮಂದಿ ಗೈರಾಗಿದ್ದರು.

ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರ ಮಾರ್ಗದರ್ಶನ ಮತ್ತು ನಗರ ಪೋಲಿಸ್ ಆಯುಕ್ತರ ಮೇಲುಸ್ತು ವಾರಿಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಲೋಹ ಶೋಧಕ ಅಳವಡಿಸಿ ಪರೀಕ್ಷಾ ಪಾವಿತ್ರತೆ ಕಾಪಾಡಲಾಯಿತು.

ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ಸೂಕ್ತ ಪೂರ್ವ ತಯಾರಿಯೊಂದಿಗೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News