ಕ್ಷುಲ್ಲಕ ವಿಚಾರ; ಯುವಕನಿಗೆ ತಂಡದಿಂದ ಹಲ್ಲೆ

Update: 2022-05-26 14:07 GMT

ಉಳ್ಳಾಲ: ಕ್ಷುಲ್ಲಕ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಯುವಕನಿಗೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಬ್ಬಕ್ಕ ಸರ್ಕಲ್ ಬಳಿ ಗುರುವಾರ ನಡೆದಿದೆ.

ಹಲ್ಲೆಗೊಳಗಾದ ಯುವಕ ನನ್ನು ಕೋಟೆಪುರ ನಿವಾಸಿ ಮುಹಮ್ಮದ್ ಕಬೀರ್ ( 24) ಎಂದು ಗುರುತಿಸಲಾಗಿದೆ.

ಘಟನೆ ವಿವರ: ಕಬೀರ್ ಮೀನುಗಾರಿಕೆಗೆಂದು ಗುರುವಾರ ಮುಂಜಾನೆ ಹೋಗುತ್ತಿದ್ದ ವೇಳೆ ಐದು ಮಂದಿಯ ತಂಡವೊಂದು ಹಲ್ಲೆ ನಡೆಸಿರುವುದಾಗಿ ದೂರಲಾಗಿದೆ. 

ಗಾಯಗೊಂಡ ಕಬೀರ್‌ ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಕಬೀರ್ ನೀಡಿದ ದೂರಿನ ಮೇರೆಗೆ ಅಶ್ರಫ್, ಅಸ್ಗರ್ ತಾಯಿಪ್, ಮುನ್ನ ವಿರುದ್ಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News