'ವಿಶ್ವ ಬೈಸಿಕಲ್ ದಿನಾಚರಣೆ' ಪ್ರಯುಕ್ತ ಸೈಕಲ್ ರ್ಯಾಲಿ; ಸಚಿವ ಡಾ.ನಾರಾಯಣ ಗೌಡ ಚಾಲನೆ
Update: 2022-06-03 04:35 GMT
ಬೆಂಗಳೂರು : ಆಝಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 'ವಿಶ್ವ ಬೈಸಿಕಲ್ ದಿನಾಚರಣೆ' ಪ್ರಯುಕ್ತ ಆಯೋಜಿಸಿದ್ದ ಸೈಕಲ್ ರ್ಯಾಲಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣ ಗೌಡ ಅವರು ಚಾಲನೆ ನೀಡಿದರು.
ಆಝಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕದ ಏಳು ಭಾಗಗಳಲ್ಲಿ ಸೈಕಲ್ ರ್ಯಾಲಿ ಆಯೋಜಿಸಿದ್ದು, ವಿಧಾನಸೌಧ ಮುಂಭಾಗದಲ್ಲಿ ಸಚಿವರು ಚಾಲನೆ ನೀಡಿದರು.