ದಮಾಮ್: ಸ್ವಾಲಿಹ್ ಉಸ್ತಾದ್ ಕಾಟಿಪಳ್ಳರ ಪುಸ್ತಕ ಬಿಡುಗಡೆ

Update: 2022-06-13 16:39 GMT

ದಮಾಮ್‌ , ಜೂ.೧೩: ಮಂಗಳೂರು, ಪಣಂಬೂರು, ಕಾಟಿಪಳ್ಳ ಪ್ರದೇಶಗಳಲ್ಲಿ ನಾಲ್ಕು ದಶಕಗಳ ಸುದೀರ್ಘ ಕಾಲ ಧಾರ್ಮಿಕ ಮತ್ತಿತರ ಕ್ಷೇತ್ರಗಳಲ್ಲಿ ಸಾಧನೆಗೈದ ಮರ್ಹೂಂ ಮುಹಮ್ಮದ್ ಸ್ವಾಲಿಹ್ ಉಸ್ತಾದ್ ಕಾಟಿಪಳ್ಳ ಅವರ ಸಿಲ್ವರ್ ಜುಬಿಲಿ ಅನುಸ್ಮರಣೆ ಅಂಗವಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಜುಬೈಲ್‌ನಲ್ಲಿ ಶುಕ್ರವಾರ ನಡೆಯಿತು.

ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಶನ್ ದಮ್ಮಾಂ ಈಸ್ಟರ್ನ್ ಪ್ರೊವಿನ್ಸ್ ಅಧ್ಯಕ್ಷ ನೌಶಾದ್ ರಷೀದ್‌ರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್  ಇಬ್ನ್  ಸ್ವಾಲಿಹ್ ಉಸ್ತಾದ್ ಕಾಟಿಪಳ್ಳ ಅನುಸ್ಮರಣಾ ಭಾಷಣಗೈದರು. ಗೌರವಾಧ್ಯಕ್ಷ ಮುಹಮ್ಮದ್ ಬಶೀರ್, ಸಲಹೆಗಾರ ಪಿ.ಎಂ.ಹನೀಫ್, ಸಹ ಕೋಶಾಧಿಕಾರಿ ಶಬೀರ್ ಉಪಸ್ಥಿತರಿದ್ದರು.

ದಮಾಮ್, ಅಲ್‌ಖೋಬರ್, ಜುಬೈಲ್‌ನ ಸದಸ್ಯರು ಭಾಗವಹಿಸಿದ್ದರು. ಸೈಫುಲ್ಲಾ ಮುಹಿಯ್ಯುದ್ದೀನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News