ಯುವಕರು ನಿರುದ್ಯೋಗದ 'ಅಗ್ನಿಪಥ'ದಲ್ಲಿ ನಡೆಯುವಂತೆ ಮಾಡುತ್ತಿದ್ದಾರೆ: ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

Update: 2022-06-19 07:15 GMT
Photo:PTI

ಹೊಸದಿಲ್ಲಿ: 'ಅಗ್ನಿಪಥ' ನೇಮಕಾತಿ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರಕಾರದ ವಿರುದ್ಧ ರವಿವಾರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

"ಪದೇ ಪದೇ ಉದ್ಯೋಗಗಳ ಬಗ್ಗೆ ಸುಳ್ಳು ಭರವಸೆ ನೀಡುವ ಮೂಲಕ ಪ್ರಧಾನಿ ದೇಶದ ಯುವಕರನ್ನು ನಿರುದ್ಯೋಗದ 'ಅಗ್ನಿಪಥ'ದಲ್ಲಿ ನಡೆಯುವಂತೆ ಮಾಡುತ್ತಿದ್ದಾರೆ. 8 ವರ್ಷಗಳಲ್ಲಿ 16 ಕೋಟಿ ಉದ್ಯೋಗಗಳನ್ನು ನೀಡಬೇಕಾಗಿತ್ತು. ಆದರೆ ಯುವಕರಿಗೆ ಪಕೋಡಗಳನ್ನು ಹುರಿಯುವ ಜ್ಞಾನ ಮಾತ್ರ ಸಿಕ್ಕಿತು. ದೇಶದ ಈ ಸ್ಥಿತಿಗೆ ಪ್ರಧಾನಿಯವರೇ ಕಾರಣ’’ಎಂದು ರಾಹುಲ್ ಗಾಂಧಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News