ಪ್ರವಾದಿ ಬಗ್ಗೆ ಅವಹೇಳನಕಾರಿ ವರದಿ; ʼವಿಶ್ವವಾಣಿʼ ಪತ್ರಿಕೆ ವಿರುದ್ಧ ಬೆಳ್ತಂಗಡಿ ಠಾಣೆಗೆ ದೂರು

Update: 2022-06-19 16:48 GMT

ಬೆಳ್ತಂಗಡಿ : ಪ್ರವಾದಿ ಮುಹಮ್ಮದ್‌ ಅವರ ಬಗ್ಗೆ ಅವಹೇಳನಕಾರಿ ವರದಿ ಮಾಡಿದ್ದಾರೆ ಎಂದು ʼವಿಶ್ವವಾಣಿʼ ಪತ್ರಿಕೆಯ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿ ನಾಯಕಿ ನೂಪುರ್ ಶರ್ಮಾ ವಿರುದ್ಧ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಇದನ್ನು ವಿಶ್ವವಾಣಿ ಪತ್ರಿಕೆಯು ತನ್ನ ತಲೆ ಬರಹದಲ್ಲಿ “ಪ್ರವಾದಿ ಹಿಂಸಾಚಾರ” ಎಂಬ ವರದಿ ಪ್ರಕಟಿಸಿತ್ತು. ಇಸ್ಲಾಮ್ ಹಾಗೂ ಪ್ರವಾದಿ ಪೈಗಂಬರರ ಬಗ್ಗೆ ಅವಹೇಳನಕಾರಿಯಾಗಿ ವರದಿ ಮಾಡಲಾಗಿದೆ ಎಂದು ಬೆಳ್ತಂಗಡಿ ಪೊಲೀಸ್‌ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಸಂದರ್ಭ ಪಿಎಫ್ಐ ಬೆಳ್ತಂಗಡಿ ಸಮಿತಿ ಸದಸ್ಯರುಗಳಾದ ದಾವೂದ್ ಜಿ.ಕೆ, ರಫೀಕ್ ಕನ್ನಡಿಕಟ್ಟೆ ಹಾಗೂ ಇಮ್ತಿಯಾಝ್ ಜಿ.ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News