ಮನೆಗೆ ನುಗ್ಗಿ ನಗನಗದು ಕಳವು

Update: 2022-06-20 17:06 GMT

ಶಂಕರನಾರಾಯಣ : ಮನೆಗೆ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ನಗ ನಗದು ಕಳವು ಮಾಡಿರುವ ಘಟನೆ ಜೂ.೧೮ರಂದು ರಾತ್ರಿ ಕಮಲಶಿಲೆ ಗ್ರಾಮದ ಹಳ್ಳಿಹೊಳೆ ಎಂಬಲ್ಲಿ ನಡೆದಿದೆ.

ರಾಘವೇಂದ್ರ ಯಡಿಯಾಳ ಎಂಬವರ ಮನೆಯ ಹಿಂಬದಿಯ ಹಟ್ಟಿಯ ಬಾಗಿಲನ್ನು ತೆರೆದು ಒಳ ಪ್ರವೇಶಿಸಿದ ಕಳ್ಳರು, ಕೋಣೆಯ ಗೋಡ್ರೇಜ್ ಕಪಾಟಿನಲ್ಲಿದ್ದ  ಅವರ ತಾಯಿಯ ೧೪ ಗ್ರಾಂ ತೂಕದ ೨ ಚಿನ್ನದ ಬಳೆ, ೩೦ ಗ್ರಾಂನ ಉದ್ದ ಚಿನ್ನದ ಸರ, ೪ ಗ್ರಾಂ ಚಿನ್ನದ ಉಂಗುರ, 5000 ರೂ. ನಗದು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ೩,೦೫,೦೦೦ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News