ಮಂಗಳೂರು: ಜೂ. 22ರಂದು ಸಾಧಕರಿಗೆ ಗೌರವಾರ್ಪಣೆ ಸಮಾರಂಭ

Update: 2022-06-22 05:08 GMT

ಮಂಗಳೂರು: ಸಾಮಾಜಿಕ ಕ್ಷೇತ್ರ, ಸಾಹಿತ್ಯ ಕ್ಷೇತ್ರ ಹಾಗೂ ಶೈಕ್ಷಣಿಕ ಕ್ಷೇತ್ರ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ, ಸಮಾಜದ ಯುವ ಜನತೆಯನ್ನು ಪ್ರೇರೇಪಿಸುವ ಉದ್ದೇಶದಿಂದ, ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಮಂಗಳೂರು ವತಿಯಿಂದ ಜೂ. 22 ರಂದು ಅಪರಾಹ್ನ ಘಂಟೆ 3 ಮಂಗಳೂರಿನ ಹಂಪನಕಟ್ಟೆಯ ಹೋಟೇಲ್ ಶ್ರೀನಿವಾಸ್‌ ಸಭಾಂಗಣದಲ್ಲಿ “ಸಾಧಕರಿಗೆ ಗೌರವಾರ್ಪಣೆ" ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಮಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪುರಸ್ಕೃತರಾದ ಡಾ| ಧರ್ಮದರ್ಶಿ ಹರಿಕೃಷ್ಣ ಪುನರೂರು ಹಾಗೂ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಬಿ.ಎ.ಎಂ.ಎಸ್. ಎಂ.ಡಿ ಯಲ್ಲಿ ಚಿನ್ನದ ಪದಕ ಪಡೆದ ಲಿಫಾಮ್ ರೋಶನಾರ ಗುರುಪುರ ಇವರನ್ನು ಮಾಜಿ ಸಚಿವ ಬಿ.ರಮಾನಾಥ ರೈ ಯವರು ಗೌರವಿಸಲಿದ್ದಾರೆ. 

ಮುಖ್ಯ ಅತಿಥಿಗಳಾಗಿ ಮಂಗಳೂರು ಶಾಸಕ ಹಾಗೂ ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕರಾದ ಯು.ಟಿ. ಖಾದರ್  ಹಾಗೂ ಲಯನ್ಸ್ ಡಿಸಿ, ಡಾ| ಸುಮತಿ ಹೆಗ್ಡೆಯವರು ಭಾಗವಹಿಸಿ ಗೌರವಿಸಲಿದ್ದಾರೆ. 

ಮಂಗಳೂರು ಮನಪಾ ಸದಸ್ಯ ಅಬ್ದುಲ್ ಲತೀಫ್ ಕಂದಕ್ ಹಾಗೂ ಅಹಿಂದ ದ.ಕ. ಜಿಲ್ಲಾಧ್ಯಕ್ಷ ವಾಸುದೇವ ಬೋಳೂರು ಹಾಗೂ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಖಿಲ ಭಾರತ ಬ್ಯಾರಿ ಪರಿಷತ್‌ ಅಧ್ಯಕ್ಷ ಜಿ.ಎಮ್. ಶಾಹುಲ್ ಹಮೀದ್ ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News